ಜೈಪುರ್: ರಾಜಸ್ಥಾನ ಮೂಲದ ಸೋಹಾನಿ ದೇವಿ 2 ವರ್ಷದವಳಿದ್ದಾಗ ವಿವಾಹವಾದಳು. ಕೆಲ ದಿನಗಳ ಹಿಂದೆ ನಡೆದ ಟೊಂಕ್ ಬಸ್ ದುರಂತದಲ್ಲಿ ಆಕೆಯ ಪತಿ ಮೃತನಾಗಿದ್ದರಿಂದ 13ನೇ ವರ್ಷಕ್ಕೆ ವಿಧುವೆ ಪಟ್ಟ ಪಡೆದುಕೊಂಡ ದುರ್ದೈವಿಯಾಗಿದ್ದಾಳೆ.
ಆಕೆಯ ವಯಸ್ಸಿನ ಮಕ್ಕಳು ಶಾಲೆಗೆ ಹೋಗುವುದು, ಆಟವಾಡುವುದರಲ್ಲಿ ಸಂತಪಡುತ್ತಾರೆ. ಆದರೆ, ಸೋಹಾನಿ ದೇವಿ ತನ್ನ 13ನೇ ವಯಸ್ಸಿನಲ್ಲಿಯೇ ವಿಧುವೆಯಾಗಿದ್ದಾಳೆ.
15 ವರ್ಷ ವಯಸ್ಸಿನ ಸೋಹಾನಿ ದೇವಿ ಪತಿ ಸುಖಿರಾಮ್ ಗುಜ್ಜರ್ ಪಚೇವರ್ ಗ್ರಾಮಕ್ಕೆ ಬಸ್ನಲ್ಲಿ ಪ್ರಯಾಣಿಸುತ್ತಿರುವಾಗ ಬಸ್ಗೆ ವಿದ್ಯುತ್ ವೈರ್ ತಗುಲಿ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ಜೀವಂತ ಸುಟ್ಟು ಭಸ್ಮವಾಗಿದ್ದರು.
ಬಸ್ ದುರಂತಕ್ಕೆ ಮುನ್ನ ತಂದೆ ತಾಯಿಯ ಮನೆಯಲ್ಲಿದ್ದ ಸೋಹಾನಿ ದೇವಿಯನ್ನು ಇದೀಗ ಪತಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಕೆಯ ಅತ್ತೆ ಮಾವನ ಮನೆಗೆ ಕರೆತರಲಾಗಿದೆ.
ಆಕೆ ಕೇವಲ ಎರಡು ವರ್ಷದವಳಿದ್ದಾಗ ಸಪ್ತಪದಿ ತುಳಿದಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದು ಗ್ರಾಮದ ಮುಖ್ಯಸ್ಥ ರಾಮದೇವ್ ಗುಜ್ಜರ್ ವಿಷಾದ ವ್ಯಕ್ತಪಡಿಸುತ್ತಾರೆ.