ರಾಷ್ಟ್ರೀಯ

ಮಾವು ಕದಿಯಲು ಬಂದ ಕಳ್ಳರು ಮಾಲೀಕನ ಮಗಳನ್ನೇ ಸಜೀವವಾಗಿ ದಹಿಸಿದರು !

Pinterest LinkedIn Tumblr

Fire

ಫತೇಪುರ್: ಮಾವು ಕದಿಯಲು ಬಂದ ಕಳ್ಳರನ್ನು ತಡೆದು ಓಡಿಸಿದ್ದರಿಂದ ಕೋಪಗೊಂಡ ಕದೀಮರು ತೋಟದ ಮಾಲೀಕನ ಮಗಳನ್ನೇ ಸಜೀವವಾಗಿ ಧಹಿಸಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಕೇಶಾನ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಅಂದರ ಶನಿವಾರ ಅಕ್ಕಪಕ್ಕದ ಕೆಲ ನಿವಾಸಗಳ ಯುವಕರು ಶಿವಭೂಷಣ್ ಎಂಬುವವರ ಮಾವಿನ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಮಾವು ಕದಿಯಲು ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಅವಕಾಶ ಮಾಡಿಕೊಡದ ಶಿವಭೂಷಣ್ ಅವರು ಅವರನ್ನು ತಡೆದಿದ್ದಾರೆ. ಈ ವೇಳೆ ಶಿವಭೂಷಣ್ ಮತ್ತು ಮಾವು ಕದಿಯಲು ಬಂದಿದ್ದ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಘಟನೆಯಿಂದ ತೀವ್ರ ಆಕ್ರೋಶಗೊಂಡಿದ್ದ ಯುವಕರು ಭಾನುವಾರ ಬೆಳಗ್ಗೆ ಶಿವಭೂಷಣ್ ಅವರ ಮನೆಗೆ ನುಗ್ಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಶಿವಭೂಷಣ್ ತೋಟಕ್ಕೆ ಹೋಗಿದ್ದು, ಅವರ ಮನೆಯವರು ಸಂಬಂಧಿಕರ ಮದುವೆಗೆ ತೆರಳಿದ್ದಾರೆ. ಮನೆಯಲ್ಲಿ ಅವರ ಮಗಳು ಮಾತ್ರ ಇದ್ದು, ಏಕಾಂಗಿಯಾಗಿದ್ದ ಪುತ್ರಿಯನ್ನು ಕದೀಮರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ದುಷ್ಕರ್ಮಿಗಳು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಲು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಾಕಿದ್ದಾರೆ ಎಂದು ಶಿವಭೂಷಣ್ ಹೇಳಿದ್ದಾರೆ. ಪ್ರಕರಣದಿಂದ ಇಡೀ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಸ್ತುತ ಕೇಶಾನ್ ಗ್ರಾಮಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು, ದುಷ್ಕರ್ಮಿಗಳ ವಿರುದ್ಧ ತಂದೆ ಶಿವಭೂಷಣ್ ಅವರು ದೂರು ದಾಖಲಿಸಿದ್ದು, ದುಷ್ಕರ್ಮಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 452 (ಹಲ್ಲೆ ನಡೆಸಲೆಂದೇ ಮನೆ ಮೇಲೆ ದಾಳಿ) ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವುದಾಗಿ ಕೇಶಾನ್ ಎಸ್ ಪಿ ಅನೀಸ್ ಅಹ್ಮದ್ ಅನ್ಸಾರಿ ಹೇಳಿದ್ದಾರೆ.

Write A Comment