ರಾಷ್ಟ್ರೀಯ

ದೈಹಿಕ ಸಂಪರ್ಕ ಹೊಂದುವಂತೆ ವಿದ್ಯಾರ್ಥಿನಿಯನ್ನು ಪೀಡಿಸುತ್ತಿದ್ದ ಕಾಮುಕ ಶಿಕ್ಷಕನ ವಿರುದ್ಧ ದೂರು

Pinterest LinkedIn Tumblr

6711rape-victim-illustration2

ಉದಂಪುರ್: ಕಾಮುಕ ಶಿಕ್ಷಕನೊಬ್ಬ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ವಿದ್ಯಾರ್ಥಿನಿಯೊಬ್ಬಳನ್ನು ಪೀಡಿಸುತ್ತಿದ್ದು, ಈತನ ಕಾಟಕ್ಕೆ ರೋಸತ್ತ ವಿದ್ಯಾರ್ಥಿನಿ ಈಗ ಪೊಲೀಸರಿಗೆ ದೂರು ನೀಡಿದ್ದಾಳೆ.

ಉದಂಪುರದ ಕತರ್ ಮನ್ವಾಲ್ ಶಾಲೆಯ ಶಿಕ್ಷಕ ವಿನಯ್ ಶರ್ಮಾ ಎಂಬಾತ ಉತ್ತಮ ಅಂಕ ನೀಡಬೇಕೆಂದರೆ ತನ್ನೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ವಿದ್ಯಾರ್ಥಿನಿಯನ್ನು ಕಾಡುತ್ತಿದ್ದನೆನ್ನಲಾಗಿದೆ. ಅಲ್ಲದೇ ಸಮಯ ಸಿಕ್ಕಾಗಲೆಲ್ಲಾ ತನ್ನ ಕುಚೇಷ್ಟೆ ತೋರಿಸುತ್ತಿದ್ದನೆಂದು ಹೇಳಲಾಗಿದೆ.

ಶಿಕ್ಷಕನ ವರ್ತನೆಯಿಂದ ಕಂಗೆಟ್ಟ ವಿದ್ಯಾರ್ಥಿನಿ ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದು, ಇದೀಗ ಆರೋಪಿ ಶಿಕ್ಷಕನ ವಿರುದ್ದ ಮನ್ವಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನ್ನ ವಿರುದ್ದ ದೂರು ದಾಖಲಾಗುತ್ತಿದ್ದಂತೆಯೇ ಶಿಕ್ಷಕ ವಿನಯ್ ಶರ್ಮಾ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Write A Comment