ರಾಷ್ಟ್ರೀಯ

ಜಮ್ಮುವಿನಲ್ಲಿ ಘರ್ಷಣೆ: ಯುವಕ ಸಾವು

Pinterest LinkedIn Tumblr

pvec05sikh-protest

ಜಮ್ಮು (ಪಿಟಿಐ): ಸಿಖ್‌ ಸಮುದಾಯದ ಯುವಕರು ಮತ್ತು ಪೊಲೀಸರ ನಡುವೆ ಗುರುವಾರ ನಡೆದ ಘರ್ಷಣೆಯಲ್ಲಿ ಒಬ್ಬ ಯುವಕ ಸಾವನ್ನಪ್ಪಿದ್ದು, ಇಬ್ಬರು ಪೊಲೀಸರು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.

ಜಮ್ಮು ನಗರ ಸೇರಿದಂತೆ ಹಲವೆಡೆ ಉದ್ವಿಗ್ನ ವಾತಾವರಣವಿದ್ದು, ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಉಗ್ರಗಾಮಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಪೋಸ್ಟರ್‌ಗಳನ್ನು  ತೆಗೆದು ಹಾಕಿರುವುದನ್ನು ಖಂಡಿಸಿ ಸಿಖ್‌ ಸಮುದಾಯದ ಯುವಕರು ನಡೆಸಿದಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ, ಯುವಕರು ಕಲ್ಲು ತೂರಾಟ ನಡೆಸಿದರು.

Write A Comment