ರಾಷ್ಟ್ರೀಯ

ತಿಂಡಿ ಕೊಳ್ಳಲು 5 ರುಪಾಯಿ ಕಳವು ಮಾಡಿದ ಮಗನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ತಾಯಿ

Pinterest LinkedIn Tumblr

Fire

ಜೈಪುರ: ಆಘಾತಕಾರಿ ಘಟನೆಯೊಂದರಲ್ಲಿ ತನ್ನ ಏಳು ವರ್ಷದ ಮಗ 5.ರೂ ಕದ್ದನೆಂದು ದೂರಿ ರಾಜಸ್ಥಾನದ ಮಹಿಳೆಯೊಬ್ಬಳು ಅವನಿಗೆ ಬೆಂಕಿ ಹಚ್ಚಿದ್ದಕ್ಕೆ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಜೈಪುರದಿಂದ 350 ಕಿಮೀ ದೂರದಲ್ಲಿರುವ ಬಿಕನೇರ್ ಜಿಲ್ಲೆಯ ರಾಮಪುರದಲ್ಲಿ ಈ ಘಟನೆ ನಡೆದಿದೆ. ಮಗುವಿಗೆ 30% ಸುಟ್ಟ ಗಾಯಗಳಾಗಿವೆ. ಅವನ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

“ನಾವು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ” ಎಂದು ಬಿಕನೇರ್ ನ ಪೊಲೀಸ್ ಮಹಾನಿರ್ದೇಶಕ ಸಂತೋಶ್ ಕುಮಾರ್ ತಿಳಿಸಿದ್ದಾರೆ. “ನಾವಿನ್ನೂ ಅವರನ್ನು ಬಂಧಿಸಿಲ್ಲ. ತನಿಖೆ ಪ್ರಗತಿಯಲ್ಲಿದೆ” ಎಂದಿದ್ದಾರೆ.

ತಿಂಡಿ ಕೊಳ್ಳಲು ತನ್ನಮ್ಮನಿಗೆ ಹೇಳದೆ ಡಬ್ಬಿಯಿಂದ ೫ ರುಪಾಯಿಯನ್ನು ಆ ಬಾಲಕ ಎತ್ತುಕೊಂಡಿದ್ದ ಎನ್ನಲಾಗಿದೆ. ಇದನ್ನು ತಿಳಿದ ತಾಯಿ ಮಗನನ್ನು ಥಳಿಸಿದ್ದಲ್ಲದೆ, ಅವನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ ಎಂದು ದೂರಲಾಗಿದೆ. ಮಗುವಿನ ಆಕ್ರಂದನ ಕೇಳಿದ ನೆರೆಹೊರೆಯವರು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನನ್ನ ಉದ್ದೇಶ ಮಗನಿಗೆ ಶಿಕ್ಷೆ ನೀಡುವುದಷ್ಟೇ ಆಗಿತ್ತು ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಾಳೆ.

Write A Comment