ಹರಿದ್ವಾರದ ಕನಗಲ್ ನ ಒಂದು ದೇವಸ್ಥಾನದಲ್ಲಿ ಅವರಿಬ್ಬರ ಮದುವೆಯಾಯ್ತು. ಗಂಡನ ಮನೆಗೆ ಹೊರಟಿದ್ದ ವಧು, ಮನೆಗೆ ಹೋಗುವ ಬದಲು, ಮಧ್ಯದಲ್ಲೇ ಸಹೋದರಿ ಜೊತೆ ಕಾಲ್ಕಿತ್ತಳು.
ಹರಿಯಾಣ ಮಹೇಂದ್ರಗಢ ನಿವಾಸಿ ಸೋಮವೀರ್ ಎಂಬಾತನಿಗೆ ಜ್ವಾಲಾಪುರದ ಒಬ್ಬ ವ್ಯಕ್ತಿ ಪರಿಚಯವಾಗಿತ್ತು. ಮದುವೆ ವಿಚಾರದಲ್ಲಿ ಆತ ಕನಕಲ್ ಎಂಬ ಊರಿನ ಒಂದು ಹುಡುಗಿಯನ್ನು ತೋರಿಸಿದ್ದಾನೆ, ಮದುವೆಯಾಗಲು ಹುಡುಗಿ 40 ಸಾವಿರ ರೂಪಾಯಿ ಕೇಳಿದ್ದಾಳೆ. ಇದಕ್ಕೆ ಒಪ್ಪಿದ ಸೋಮವೀರ್ 40 ಸಾವಿರ ರೂಪಾಯಿ ನೀಡಿ ಮದುವೆಯಾಗಿದ್ದಾನೆ.
ದೇವಸ್ಥಾನದಲ್ಲಿ ಸೋಮವೀರ್ ಮದುವೆಯಾದ ಯುವತಿ, ತನ್ನ ಜೊತೆ ಸಹೋದರಿಯನ್ನು ಕರೆದುಕೊಂಡು ಬರುವುದಾಗಿ ಹೇಳಿದ್ದಾಳೆ, ಇದಕ್ಕೆ ಆತ ಒಪ್ಪಿದ್ದಾನೆ. ಆದರೆ ಮಧ್ಯ ದಾರಿಯಲ್ಲಿ ಬಸ್ ನಿಂತ ವೇಳೆ ಶೌಚಾಲಯಕ್ಕೆ ಹೋಗುವುದಾಗಿ ಬಸ್ ಇಳಿದ ಇಬ್ಬರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ, ಸೋಮವೀರ್ ಅವರನ್ನು ಹಿಡಿದಿದ್ದಾನೆ. ವಿಷಯ ತಿಳಿದು ಅಲ್ಲಿಗೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಆಕೆ ಹಣಕ್ಕಾಗಿ ವಿವಾಹವಾಗುವ ನಾಟಕವಾಡಿದ್ದಾಳೆಂಬ ವಿಷಯ ಹೊರಬಿದ್ದಿದೆ.