ರಾಷ್ಟ್ರೀಯ

ಪಾರ್ಸೆಲ್ನಲ್ಲಿ ಬಾಂಬ್ ಇಟ್ಟ ದುಷ್ಕರ್ಮಿಗಳು: ಓರ್ವ ಮೃತ್ಯು

Pinterest LinkedIn Tumblr

bomb-blast

ಬಿಹಾರ, ಮೇ 26: ಜೆಡಿಯು ಜಿಲ್ಲಾಧ್ಯಕ್ಷ ಅಭಯ್ ಖುಷ್ವಂತ್ ಅವರಿಗೆ ಕಳುಹಿಸಲಾಗಿದ್ದ ಪಾರ್ಸೆಲ್ ಸ್ಫೋಟಗೊಂಡು ಒಬ್ಬ ಮೃತಪಟ್ಟು ಇನ್ನೊಬ್ಬ ಗಾಯಗೊಂಡ ಘಟನೆ ಬಿಹಾರದ ಗಯಾದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ವರದಿಗಳ ಪ್ರಕಾರ ಸೋಮವಾರ ಸಂಜೆ ಅಭಯ್ ಖುಷ್ವಂತ್ ಅವರಿಗೆ ಬಂದಿದ್ದು, ಅದನ್ನು ಇಂದು ಬೆಳಗ್ಗೆ ಕೆಲಸದಾಳು ಸಂತೋಷ್‌ ಕುಮಾರ್‌ ಎಂಬವರು ತೆರೆಯುತ್ತಿದ್ದ ವೇಳೆ ಸ್ಫೋಟಗೊಂಡಿದೆ. ಪರಿಣಾಮವಾಗಿ ಸಂತೋಷ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಖುಷ್ವಂತ್ ಅವರ ಭಾವ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವೇಳೆ ಖುಷ್ವಂತ್ ಮನೆಯಲ್ಲಿಲ್ಲದಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Write A Comment