ರಾಷ್ಟ್ರೀಯ

ರಾಮ ಮಂದಿರದ ಬಗೆಗೆ ಬಿಜೆಪಿ ಮಾತನಾಡಿದರೆ ಹುಷಾರ್ ಎಂದ ಸ್ವಾಮೀಜಿ

Pinterest LinkedIn Tumblr

Shankaracharya

ಸರ್ವೋಚ್ಚ ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ನೀಡಿದರೆ ಯಾವುದೇ ರಾಜಕೀಯದ ನೆರವು ಪಡೆಯದೇ  ಶ್ರೀರಾಮನ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಿಸುತ್ತೇವೆ ಎಂದು ದ್ವಾರಕಾಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರು ಘೋಷಿಸಿದ್ದಾರೆ.

ರಾಜ್ಯಸಭೆಯಲ್ಲಿ ಬಹುಮತ ಇಲ್ಲದಿರುವುದರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅಸಾಧ್ಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ಅಸಹಾಯಕತೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರು ಮುಂದೆ ಬಿಜೆಪಿ ನಾಯಕರು ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

ಅಲ್ಲದೇ ಗೃಹ ಸಚಿವ ರಾಜ್‍ನಾಥ್‍ಸಿಂಗ್ ಅವರೇ, ನಾನು ಕರಜೋಡಿಸಿ ಬೇಡುವೆ, ದಯ ಮಾಡಿ ಇನ್ನು ನೀವು ಯಾವುದೇ ಕಾರಣಕ್ಕೂ ರಾಮಜನ್ಮಭೂಮಿ ಬಗ್ಗೆ ಚಕಾರ ಎತ್ತಬೇಡಿ. ನಮ್ಮ ರಾಮನ  ಮಂದಿರವನ್ನು ನಾವೇ ಕಟ್ಟಿಕೊಳ್ಳುತ್ತೇವೆ ಎಂದು ಕಿಡಿಕಾರಿದ್ದಾರೆ.

Write A Comment