ಒಲ್ಲಿಯಾ, ಏ.23: ತಾನು ಕೇಳಿದ ಹಾಡನ್ನು ಹಾಡಲಿಲ್ಲ ಎಂಬ ಕಾರಣಕ್ಕೆ ಆರ್ಕೆಸ್ಟ್ರಾ ಗಾಯಕಿಯೊಬ್ಬಳನ್ನು ವ್ಯಕ್ತಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಒಲ್ಲಿಯಾ ಜಿಲ್ಲೆಯ ದಯಾ ಚಾಪ್ರಾ ಎಂಬ ಹಳ್ಳಿಯಲ್ಲಿ ನಡೆದಿದೆ.
ಹಳ್ಳಿಯಲ್ಲಿ ಇಂದು ನಡೆದ ಮದುವೆಗಾಗಿ ಆರ್ಕೆಸ್ಟ್ರಾ ಆಯೋಜಿಸ ಲಾಗಿತ್ತು. ಗಾಯಕರು ಹಾಡುತ್ತಿದ್ದರು. ಆಗ ಬಬ್ಲುಕುಮಾರ್ ಎಂಬುವನು 23ರ ಹರೆಯದ ಪಿಯೂ ಎಂಬ ಗಾಯಕಿಗೆ ಯಾವುದೋ ಹಾಡು ಹೇಳುವಂತೆ ಸೂಚಿಸಿದ. ಗಾಯಕಿ ಆ ಹಾಡು ಹಾಡಲು ನಿರಾಕರಿಸಿದಳು. ಆ ಬಬ್ಲುಕುಮಾರ್ ಅವಳನ್ನು ರಿವಾಲ್ವರ್ನಿಂದ ಷೂಟ್ ಮಾಡಿದ. ಯುವತಿ ಸ್ಥಳದಲ್ಲೇ ಸಾವನ್ನಪ್ಪಿದಳು. ಬಬ್ಲುಕುಮಾರ್ನನ್ನು ಬಂಧಿಸಲಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಕೆ.ಸಿ.ಗೋಸ್ವಾಮಿ ತಿಳಿಸಿದ್ದಾರೆ.