ಇಸ್ಲಾಮಾಬಾದ್: ಕಾಶ್ಮೀರದೊಂದಿಗೆ ಬಾಲ್ಯದಿಂದಲೂ ತಮಗೆ ಭಾವನಾತ್ಮಕ ನಂಟು ಇರುವುದಾಗಿ ಹೇಳಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಕಾಶ್ಮೀರಿ ಜನರ ಹಕ್ಕುಗಳಿಗಾಗಿ ತಮ್ಮ ದೇಶ ನಿರಂತರ ಹೋರಾಟ ನಡೆಸಲಿದೆ. ಕಾಶ್ಮೀರ, ಪಾಕಿಸ್ತಾನದ ಕುತ್ತಿಗೆಯ ಪ್ರಧಾನ ರಕ್ತನಾಳವಿದ್ದಂತೆ ಎಂದು ಹೇಳಿದ್ದಾರೆ.
‘ಕಾಶ್ಮೀರ ಏಕತಾ ದಿನ’ದ ಅಂಗವಾಗಿ ಮುಜಫ್ಫರಾಬಾದ್ನಲ್ಲಿ ಗುರುವಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ವಿಧಾನಸಭೆಯ ಜಂಟಿ ಅಧಿವೇಶನ ಉದ್ದೇಶಿಸಿ ಅವರು ಮಾತನಾಡಿದರು.
ಕಾಶ್ಮೀರ ವಿವಾದ ಪರಿಹಾರವಾದರೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸಾಧ್ಯ. ಈ ಭಾಗದ ಸುಮಾರು 150 ಕೋಟಿ ಜನರು ಕಾಶ್ಮೀರ ವಿವಾದದೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಿದರು.
ಕಾಶ್ಮೀರಿ ಜನರ ವಿರುದ್ಧವಾಗಿ ತೆಗೆದು ಕೊಳ್ಳುವ ಯಾವುದೇ ತೀರ್ಮಾನಗಳನ್ನು ಪಾಕಿಸ್ತಾನ ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎಂದು ವಿವರಿಸಿ ದರು. ಕಾಶ್ಮೀರ ವಿವಾದಕ್ಕೆ ಇರುವ ಏಕೈಕ ಪರಿ ಹಾರವೆಂದರೆ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಜನರಿಗೇ ನೀಡುವುದು. ದಬ್ಬಾಳಿಕೆಯ ಕಾರ್ಮೋಡ ಕರಗಿ ಕಾಶ್ಮೀರಿ ಜನರು ಸ್ವಾತಂತ್ರ್ಯದ ಅರು ಣೋದಯ ಕಾಣುವ ಕಾಲ ದೂರವಿಲ್ಲ ಎಂದರು.
ಕಾಶ್ಮೀರ ವಿವಾದ ಇಡೀ ದೇಶಕ್ಕೆ ಸಂಬಂಧಿಸಿದ್ದು. ದೃಢ ನಿಶ್ಚಯದೊಂದಿಗೆ ನಾವು ಪ್ರಗತಿ ಸಾಧಿಸು ತ್ತೇವೆ. ಕಾಶ್ಮೀರಕ್ಕೆ ಬೆಂಬಲ ನೀಡುವುದು ತಮ್ಮ ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಷರೀಫ್ ಹೇಳಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ ಆಧಾರದಲ್ಲಿ ಕಾಶ್ಮೀರ ವಿವಾದಕ್ಕೆ ಶಾಂತಿಯುತ ನಿರ್ಣಯ ಕೈಗೊಳ್ಳುವುದಕ್ಕೆ ಪಾಕಿಸ್ತಾನ ಬದ್ಧವಾಗಿದೆ ಎಂದರು.
ಫೆ.5ರಂದು ಏಕತಾ ದಿನ
ಪ್ರತೀ ವರ್ಷ ಫೆ.5 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ‘ಕಾಶ್ಮೀರ ಏಕತಾ ದಿನ’ ಆಚರಿಸಲಾಗುತ್ತದೆ. ಕಾಶ್ಮೀರಿ ಜನರಿಗೆ ಬೆಂಬಲ ಸೂಚಿಸುವುದು ಈ ಆಚರಣೆಯ ಪ್ರಮುಖ ಕಾರ್ಯಸೂಚಿ. ಈ ದಿನ ವಿಚಾರಸಂಕಿರಣಗಳು, ಪ್ರತಿಭಟನೆಗಳು ಹಾಗೂ ವಿವಿಧ ಪಕ್ಷಗಳಿಂದ ಕಾರ್ಯಕ್ರಮಗಳು ನಡೆ ಯುತ್ತವೆ.