ರಾಷ್ಟ್ರೀಯ

ಅಲಿಗಢದಲ್ಲಿ ಮತಾಂತರ ಮಾಡಿಯೇ ಸಿದ್ಧ: ಭಜರಂಗದಳ

Pinterest LinkedIn Tumblr

bajran

ಲಖನೌ: ಅಲಿಗಢದದಲ್ಲಿ ಡಿ.25ರಂದು ಆಯೋಜಿಸಿರುವ ಮತಾಂತರ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಆದರೆ ನಾವು ಈ ಕಾರ್ಯಕ್ರಮ ಮಾಡಿಯೇ ತೀರುತ್ತೇವೆ ಎಂದು ಬಜರಂಗದಳ ಹೇಳಿದೆ.

ಧರ್ಮ ಜಾಗರಣ ಸಮನ್ವಯ ವಿಭಾಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಬಿಜೆಪಿ ಸಂಸದ ಯೋಗಿ ಅದಿತ್ಯನಾಥ್ ಹೇಳಿದ್ದಾರೆ.

”ಜಾತ್ಯತೀತತೆಗೆ ಪಕ್ಷ ಬದ್ಧ. ಕಾನೂನು ಸುವ್ಯವಸ್ಥೆ ರಾಜ್ಯಕ್ಕೆ ಸಂಬಂಧಿಸಿದ ವಿಷಯ ಹಾಗಾಗಿ ರಾಜ್ಯ ಸರಕಾರ ಈ ಕುರಿತು ಕ್ರಮ ಜರುಗಿಸಬೇಕು,”ಎಂಬ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಆಗ್ರಾದಲ್ಲಿ 57 ಕುಟುಂಬಗಳು ಮತಾಂತರಗೊಂಡ ವಿಚಾರವಾಗಿ ಸರಕಾರ ಸಂಸತ್ತಿನಲ್ಲಿ ತೀವ್ರ ಮುಖಭಂಗ ಎದುರಿಸಿದ ನಂತರ ನಖ್ವಿ ಈ ಹೇಳಿಕೆ ನೀಡಿದ್ದರು.

ಕ್ರಿಶ್ಚಿಯನ್ ಹಾಗೂ ಮಸ್ಲಿಮರ ಪೂರ್ವಜರು ಹಿಂದೂಗಳೇ ಆಗಿದ್ದರು ಈಗ ಅವರನ್ನು ವಾಪಸ್ ಮಾತೃ ಧರ್ಮಕ್ಕೆ ಕರೆತರುವ ಕೆಲಸ ಆಗುತ್ತಿದೆ ಎಂಬುದು ಕೇಸರಿ ಬಣಗಳ ವಾದ.

ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸುವುದು ನಿಜವಾದ ‘ಘರ್ ವಾಪಸಿ’

ದೇಶದ ಮುಸ್ಲಿಮರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರುವುದಕ್ಕಿಂತ, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವುದೇ ನಿಜವಾದ ‘ಘರ್ ವಾಪಸಿ’ ಎಂದು ಉತ್ತರ ಪ್ರದೇಶದ ಶಿವಸೇನೆ ಹೇಳಿದೆ.

ದೇಶದಲ್ಲಿ ಭಾರಿ ಗುಲ್ಲೆಬ್ಬಿಸಿರುವ ಮರುಮತಾಂತರವನ್ನು ವಿರೋಧಿಸಿರುವ ಶಿವಸೇನೆಯ ಉತ್ತರ ಪ್ರದೇಶದ ಮುಖ್ಯಸ್ಥ ಅನಿಲ್ ಸಿಂಗ್, ”ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಬೇಕಾದರೆ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ನಿಜವಾದ ಘರ್ ವಾಪಸಿ ಅದು. ಆರೆಸ್ಸೆಸ್/ಬಿಜೆಪಿಯ ಹಮ್ಮಿಕೊಂಡಿರುವ ಈ ಕಾರ್ಯಕ್ರಮವಲ್ಲ,” ಎಂದಿದ್ದಾರೆ.

”ಆರೆಸ್ಸೆಸ್/ಬಿಜೆಪಿಯ ಮರುಮತಾಂತರವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಮತಾತಂರಗೊಳ್ಳುವ ಮುಸ್ಲಿಮರು ಹಿಂದೂ ಧರ್ಮದವರನ್ನು ಕೆಡಿಸುತ್ತಾರೆ. ವಿಭಿನ್ನ ಸಂಸ್ಕೃತಿಯ ಮುಸ್ಲಿಮರನ್ನು ಹಿಂದೂ ಧರ್ಮದಲ್ಲಿ ಒಪ್ಪಿಕೊಳ್ಳಲಾಗದು,” ಎಂದಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಮುಕ್ತ ಮನಸ್ಸಿನಿಂದ ‘ಘರ್ ವಾಪಸಿ’ ಮರುಮತಾಂತರಗೊಂಡರೆ ತಪ್ಪಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಒತ್ತಡ ಹಾಗೂ ಆಮಿಷಗಳಿಂದ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮತಾಂತರ ಆಗಿರುವುದು ನಿಜವಲ್ಲವೇ ?
* ಯೋಗಿ ಆದಿತ್ಯನಾಥ್ ಬಿಜೆಪಿ ಸಂಸದ

ಬಿಜೆಪಿ ಹಾಗೂ ಆರೆಸ್ಸೆಸ್ ಗಾಂಧಿ ತತ್ತ್ವದ ಬಗ್ಗೆ ಮಾತನಾಡುವುದು ದ್ವಂದ್ವ ಧೋರಣೆ. ಗಾಂಧಿಯ ಅಹಿಂಸೆ, ಸತ್ಯ ಹಾಗೂ ಸೌಹಾರ್ದತೆಗೆ ವಿರುದ್ಧವಾದ ಹೆಡ್ಗೇವರ್ ಸಾರ್ವಕರ್ ಗೊಲ್ವಾಲ್ಕರ್ ಅವರ ಸಿದ್ಧಾಂತವನ್ನೇ ಅವರು ಪ್ರತಿಪಾದಿಸಲಿ.
* ದಿಗ್ವಿಜಯ್ ಸಿಂಗ್ ಕಾಂಗ್ರೆಸ್ ನಾಯಕ

Write A Comment