ಗಲ್ಫ್

ಅಜ್ಮಾನಿನಲ್ಲಿ ಮಾರ್ಗದೀಪ ಸಾರ್ವಜನಿಕ ಗಣೇಶೋತ್ಸವ ಆಚರಣೆ

Pinterest LinkedIn Tumblr

Photo: Ashok Belman

ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಆಯೋಜಿಸಿದ 5ನೇ ವರ್ಷದ ಮಾರ್ಗದೀಪ ಸಾರ್ವಜನಿಕ ಗಣೇಶೋತ್ಸವ ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ಅಜ್ಮಾನ್ ವುಮೆನ್ಸ್ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಆಚರಿಸಲಾಯಿತು .

ಪಾಲ್ಗೊಂಡ ಭಕ್ತಾದಿಗಳ ಸಂಖ್ಯೆನೇ ಯಶಸ್ವಿಗೆ ಸಾಕ್ಷಿ ಆಗಿರುವ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ ಕೃಷ್ಣ ಜೆ ಪಾಲೆಮಾರ್, ಮಾಜಿ ಮೇಯರ್ ಶ್ರೀ ಶಂಕರ್ ಭಟ್, ರಾಮಕ್ಷತ್ರಿಯ ಸಂಘ ಮಂಗಳೂರು ಅಧ್ಯಕ್ಷರಾದ ಶ್ರೀ ಜೆ .ಕೆ .ರಾವ್, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸರ್ವೋತ್ತಮ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಧಾರ್ಮಿಕ ಕಾರ್ಯಕ್ರಮ ಭಜನೆ ಹಾಗು ಹುಲಿವೇಷ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಮೆರವಣಿಗೆಯೊಂದಿಗೆ ಶ್ರೀ ಗಣೇಶ ವಿಸಸರ್ಜನೆ ನೆರವೇರಿಸಲಾಯಿತು . ಸಮಾರಂಭದಲ್ಲಿ ಲೇಖಕ ಗಣೇಶ್ ರೈ, ಪ್ರವೀಣ್ ರಾವ್ ಉಪ್ಪುರು ದಂಪತಿಗಳನ್ನು ಸನ್ಮಾನಿಸಲಾಯಿತು.

Comments are closed.