ಗಲ್ಫ್

ದುಬಾಯಿಯಲ್ಲಿ ಅದ್ಧೂರಿಯಾಗಿ ನಡೆದ ಯು.ಎ.ಇ. ಬಂಟರ 45ನೇ ವಾರ್ಷಿಕ ಸ್ನೇಹಮಿಲನ

Pinterest LinkedIn Tumblr

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ನಾಲ್ಕು ದಶಕಗಳಿಂದ ಕಾರ್ಯೊನ್ಮುಖವಾಗಿರುವ ಯು.ಎ.ಇ. ಬಂಟರ ಸಂಘಟನೆಯ 45ನೇ ವಾರ್ಷಿಕ ಸ್ನೇಹಮಿಲನ ಹಾಗೂ “ಬಂಟ ವಿಭೂಷಣ ಪ್ರಶಸ್ತಿ ” ಪ್ರದಾನ ಸಮಾರಂಭ ಅತ್ಯಂತ ವರ್ಣ ರಂಜಿತವಾಗಿ ನೆರವೇರಿತು.

2019 ಮೇ 3ನೇ ತಾರೀಕು ಶುಕ್ರವಾರ ಮಧ್ಯಾಹ್ನ 2.00 ಗಂಟೆಯಿಂದ ರಾತಿ 11.00 ಗಂಟೆಯವರೆಗೆ ದುಬಾಯಿ ಇಂಡಿಯನ್ ಸ್ಕೂಲ್, ಶೇಖ್ ರಾಶೀದ್ ಸಭಾಂಗಣದಲ್ಲಿ ಏರ್ಪಡಿಸಿದ್ದು ಯು.ಎ.ಇ. ಯ ಎಲ್ಲಾ ಭಾಗಗಳಿಂದ ಬಂಟ ಬಾಂಧವರು ಹಾಗೂ ಆಹ್ವಾನಿತ ಅತಿಥಿಗಳು ಅಪಾರ ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದರು.

ಮುಖ್ಯ ಅತಿಥಿಗಳನ್ನು ಸಭಾಂಗಣದ ಮಹಾಧ್ವಾರದಿಂದ ವೇದಿಕೆಯವರೆಗೆ ಕೇರಳದ ಪಂಚವಾಧ್ಯ ಚೆಂಡೆವಾದನದೊಂದಿಗೆ ಬಂಟ್ಸ್ ಸುಮಂಗಲೆಯರು ಪೂರ್ಣ ಕುಂಭ ಕಳಸದೊಂದಿಗೆ ಮೆರವಣಿಗೆಯಲ್ಲಿ ಬರಮಾಡಿಕೊಂಡರು.

ಯು.ಎ.ಇ. ಬಂಟ್ಸ್ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಸಾಂಪ್ರದಾಯಿಕವಾಗಿ ಸರ್ವವರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯು.ಎ.ಇ. ಬಂಟ್ಸ್ ಮಹಾ ಪೋಷಕರಾದ ಡಾ| ಚಂದ್ರಕುಮಾರಿ ಬಿ. ಆರ್. ಶೆಟ್ಟಿಯವರು ಹಾಗೂ ಅಲ್ ಕಾರ್ಗೊ ಲಾಜಿಸ್ಟಿಕ್ ಗ್ಲೋಬಲ್ ಸಿ.ಇ.ಒ. ಮತ್ತು ವ್ಯವಸ್ಥಾಪಕ ನಿರ್ದೇಶಕರು ಡಾ| ಶಶಿಕಿರಣ್ ಶೆಟ್ಟಿ, ಕರ್ನಾಟಕ ಚಂದನವನದ ಪ್ರಖ್ಯಾತ ನಿರ್ದೇಶಕರು, ನಿರ್ಮಾಪಕರು, ಸಾಹಿತಿ ಮತ್ತು ನಾಯಕ ನಟರಾದ ಶ್ರೀ ರಿಶಬ್ ಶೆಟ್ಟಿಯವರು, “ಬಂಟ ವಿಭೂಷಣ ಪ್ರಶಸ್ತಿ” ಪುರಸ್ಕೃತರು ಡಾ ಇಂದಿರಾ ಹೆಗ್ಡೆ, ಎನ್. ಎಂ. ಸಿ. ಟ್ರೇಡಿಂಗ್ ಸಿ.ಇ.ಒ. ಶ್ರೀ ನಿರ್ಮನ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಸಮಾರಂಭಕ್ಕೆ ಅದಿಕೃತ ಚಾಲನೆ ನೀಡಲಾಯಿತು.

ಶ್ರೀಮತಿ ಸಂಗೀತ ಶೆಟ್ಟಿಯವರ ತ್ಂಡದಿಂದ ಪ್ರಾರ್ಥನೆ, ಸುಶ್ಮಾ ಶೆಟ್ಟಿ ನಿರ್ದೇಶನದಲ್ಲಿ ಮಕ್ಕಳ ಸ್ವಾಗತ ನೃತ್ಯ ಹಾಗೂ ಶ್ರೀ ನಿತ್ಯಾನಂದ ಶೆಟ್ಟಿಯವರಿಂದ ಸ್ವಾಗತದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿನುತಾ ರೈ ನಿರ್ದೇಶನದ ಬಂಟ್ಸ್ ರಾಕರ್, ಕೀರ್ತಿ ಶೆಟ್ಟಿ ನಿರ್ದೇಶನದ ಜಂಪಿನ್ ಜಿಲ್ಲ್ಸ್, ರಮ್ಯಾ ಶೆಟ್ಟಿ ನಿರ್ದೇಶನದ ರಾಡಿಕಲ್ ಡ್ಯಾನ್ಸ್ 2, ವಿಧ್ಯಾ ಶೆಟ್ಟಿ ನಿರ್ದೇಶನದ ಚುರುಕ್ ಪಾರ್ಟಿ, ದೇವಿಕಾ ಮಲ್ಲಿ ನಿರ್ದೇಶನದ ರಾಡಿಕಲ್ ಡ್ಯಾನ್ಸ್ 1, ಪ್ರಿಯ ಶೆಟ್ಟಿ ನಿರ್ದೇಶನದ ಸಮರ್ಪಣ್ ಈ ಎಲ್ಲಾ ತಂಡ ಮಕ್ಕಳಿಂದ ಆಕರ್ಷಕ ಸಮೂಹ ನೃತ್ಯ ಸರ್ವರ ಮನ ಸೆಳೆಯಿತು.

ಪ್ರಖ್ಯಾತ ಯುವ ಗಾಯಕ ನಿಶಾನ್ ರೈ ಯವರ ಸುಮಧುರ ಕಂಠಸಿರಿಯಲ್ಲಿ ಸುಶ್ರಾವ್ಯ ಗಾಯನ ಕಾರ್ಯಕ್ರಮ ಸರ್ವ ಮೆಚ್ಚುಗೆಯನ್ನು ಪಡೆಯಿತು.

ಊರಿನಿಂದ ಆಗಮಿಸಿದ ಶ್ರೀ ನಿತೇಶ್ ಶೆಟ್ಟಿ ತಮ್ಮದೇ ಆದ ಶೈಲಿಯಲ್ಲಿ ಕಾರ್ಯಕ್ರಮ ನಿರೂಪಣೆಯನ್ನು ನಡೆಸಿ ಕೊಟ್ಟರು.

ಯು.ಎ.ಇ. ಬಂಟ್ಸ್ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಗೌರವ ಸಮರ್ಪಣೆ
ಶ್ರೀ ಸರ್ವೋತ್ತಮ ಶೆಟ್ಟಿ ಯವರು 2018-19ನೇ ಸಾಲಿನ ಯು.ಎ.ಇ. ಬಂಟ್ಸ್ ಕಾರ್ಯಕಾರಿ ಸಮಿತಿಯ ಸದಸ್ಯ ದಂಪತಿಗಳನ್ನು ವೇದಿಕೆಗೆ ಬರಮಾಡಿಕೊಂಡು ವಿವಿದ ಕಾರ್ಯಕ್ರಮಗಳ ಮೂಲಕ ತಮ್ಮ ವಿಸ್ವಾರ್ಥ ಸೇವೆಯನ್ನು ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. 2019-20 ನೇ ಸಾಲಿನ ನೂತನ ಸಮಿತಿಯವರನ್ನು ವೇದಿಕೆಗೆ ಬರಮಾಡಿಕೊಂಡು ನೂತನ ಸಾಲಿನ ಜವಬ್ಧಾರಿಯನ್ನು ನೀಡಲಾಯಿತು.

ಯು.ಎ.ಇ. ಬಂಟ್ಸ್ ನ ಪ್ರಾಯೋಜಕರುಗಳಿಗೆ ಗೌರವ ಸಮರ್ಪಣೆ
ಯು.ಎ.ಇ. ಬಂಟ್ಸ್ ನ ಎಲ್ಲಾ ಕಾರ್ಯಕ್ರಮಗಳಿಗೆ ಬೆಂಬಲ ಪ್ರೋತ್ಸಾಹ, ಪ್ರಾಯೊಜಕತ್ವವನ್ನು ನೀಡಿರುವ ಉಧ್ಯಮಿಗಳನ್ನು ವೇದಿಕೆಗೆ ಬರಮಾಡಿಕೊಂಡು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ಲಾಟಿನಂ ಪ್ರಾಯೋಜಕರು ಶ್ರೀ ನಿಹಾಲ್ ಅಬ್ದುಲ್ಲಾ- ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್, ಶ್ರೇಯಾ ಶೆಟ್ಟಿ – ಅಲ್ಫಾ ಗ್ಳೊಬಲ್ ಕನೆಕ್ಟ್, ಶ್ರೀ ಸುದೇಶ್ ಗಿರಿಯನ್ – ಸಿ.ಇ.ಒ. ಎಕ್ಸ್ ಪ್ರೆಸ್ಸ್ ಮನಿ -ಗ್ಲೋಬಲ್ ಟ್ರಾನ್ಸ್ ಫರ್, ಶ್ರೀ ವಿನೋದ್ ನಂಬಿಯಾರ್- ಯು.ಎ.ಇ. ಎಕ್ಸೆಂಜ್.

ಗೋಲ್ಡ್ ಸ್ಪಾನರ್ಸ್ : ಶ್ರೀ ರವಿ ರೈ ಎನ್.ಎಂ.ಸಿ.ಗ್ರೂಪ್, ಶ್ರೀ ದಿವಾಕರ್ ಶೆಟ್ಟಿ- ರಾಯಲ್ ವಿಶನ್ ಗ್ಲಾಸ್, ಶ್ರೀ ಸತೀಶ್ ಹೆಗ್ಡೆ ವೈಟ್ ಫೀಲ್ದ್ ಜೆನರಲ್ ಟ್ರಾನ್ಸ್ಪೋರ್ಟ್ ಅಬುಧಾಬಿ, ಶ್ರೀ ರವಿ ಶೆಟ್ಟಿ ಸ್ಟ್ರಕ್ಟನ್ ಕನ್ಸ್ಟ್ರಕ್ಶನ್, ಶ್ರೀ ಕಾರ್ತೀಕೆಯನ್-ಯೂನಿಯನ್ ಇನ್ಸೂರೆನ್ಸ್ ಕಂಪೆನಿ.

ಸಿಲ್ವರ್ ಸ್ಪಾನ್ಸರ್ಸ್ : ಶ್ರೀಯುತರುಗಳಾದ ದಿನೇಶ್ ಶೆಟ್ಟಿ – ಡ್ಯೂಮೆಕ್ ಇಂಜಿನಿಯರಿಂಗ್, ಪ್ರತಾಪ್ ಕಿರಣ್ ಶೆಟ್ಟಿ- ರಿಯಾ ಫೈನಾನ್ಸಿಯಲ್ ಸರ್ವಿಸಸ್, ಸ್ತೈರ್ಯ ಕರುಣಾಕರ್ ಎಸ್. ಫ್ಯೂಚರ್ ಹೆವಿ ಎಕ್ಯೂಪ್ಮೆಂಟ್ ದುಬಾಯಿ, ಶ್ರೀ ದೀವೆಶ್ ಆಳ್ವ- ವುಡ್ ಲ್ಯಾಂಡ್ಸ್ ರೆಸ್ಟೊರೆಂಟ್, ಶ್ರೀ ರತ್ನಾಕರ್ ಶೆಟ್ಟಿ- ಮಹೆಂದ್ರ ಅಶೆರ್ ಅಂಡ್ ಕಂಪೆನಿ, ಶ್ರೀ ಸುಂದರ್ ಶೆಟ್ಟಿ ನಿಹಾಲ್ ರೆಸ್ಟೊರೆಂಟ್, ಶ್ರೀ ಪ್ರೇಮನಾಥ್ ಶೆಟ್ಟಿ – ಹೀಟ್ ಶೀಲ್ಡ್, ಶ್ರೀ ಗುಣಶೀಲ್ ಶೆಟ್ಟಿ ಏಸ್ ಕ್ರೇನ್ / ಉಪಾಸನ ಕುದುರೆಮುಖ್, ಶ್ರೀ ಪ್ರವೀ ಣ್ ಕುಮಾರ್ ಶೆಟ್ಟಿ- ಫಾರ್ಚೂನ್ ಗ್ರೂಪ್ ಅಫ್ ಹೋಟೆಲ್ಸ್ ಯು.ಎ.ಇ. ಮತ್ತು ಜಾರ್ಜೀಯ,

ವೆಲ್ ವಿಶರ್ಸ್ : ಶ್ರೀ ಸರ್ವೋತ್ತಮ್ ಶೆಟ್ಟಿ – ಸಿರಿನ್ ಆಟೋ ಸರ್ವಿಸಸ್, ಶ್ರೀ ಶೇಕರ್ ಶೆಟ್ಟಿ – ಸಾಯಿಬಾ ಕ್ಯಾಟರಿಂಗ್.

ಉಡುಗೊರೆ ಪ್ರಾಯೋಜಕರು : ಶ್ರೀ ಜಯರಾಂ ರೈ – ಬಿನ್ ಫರ್ದಾನ್ ಗ್ರೂಪ್, ಶ್ರೀ ಬಾಲಕೃಷ್ಣ ಶೆಟ್ಟಿ – ಮುಂಬೈ ಎಕ್ಸ್ ಪ್ರೆಸ್ಸ್ ರೆಸ್ಟೊರೆಂಟ್, ಶ್ರೀ ಶಿವ ಶೆಟ್ಟಿ – ಹಿಮಾಲಯ, ಶ್ರೀ ವಾಸು ಶೆಟ್ಟಿ -ಬ್ರಿಟಾನಿಯ, ನಿಕಾನ್ ಕ್ಯಾಮೆರಾ , ಶ್ರೀಮತಿ ಶಶಿ ಶೆಟ್ಟಿ ಎಸ್ಕಾಟ್ ವೋಚರ್ ಒಮಾನ್ ಮತ್ತು ಟರ್ಕಿ.

ಡಾ| ಇಂದಿರಾ ಹೆಗ್ಡೆಯವರಿಗೆ “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ
ಕನ್ನಡ ಮತ್ತು ತುಳು ಭಾಷಾ ಸಾಹಿತಿ, ಉಪನ್ಯಾಸ, ಸಂಶೋಧನೆ ಹಾಗೂ ಸಮಾಜ ಸೇವೆಯಲ್ಲಿ ಸಕ್ರೀಯವಾಗಿರುವ ಪ್ರತಿಭಾವಂತ ಹಿರಿಯರಾದ ಡಾ| ಇಂದಿರಾ ಹೆಗ್ಡೆಯವರಿಗೆ ಯು.ಎ.ಇ. ಬಂಟ್ಸ್ ಕೊಡಮಾಡುವ 2018-19ನೇ ಸಾಲಿನ “ಬಂಟ ವಿಭೂಷಣ ಪ್ರಶಸ್ತಿ” ಯನ್ನು ಪ್ರದಾನಿಸಲಾಯಿತು ಡಾ| ಚಂದ್ರಕುಮಾರಿ ಬಿ. ಆರ್. ಶೆಟ್ಟಿಯವರು ಹಾಗೂ ಡಾ| ಶಶಿಕಿರಣ್ ಶೆಟ್ಟಿ ಯವರು ಸನ್ಮಾನ ಪ್ರಕ್ರಿಯೆಯನ್ನು ನೆರವೇರಿಸಿಕೊಟ್ಟರು. ಶ್ರೀ ಸಂಪತ್ ಶೆಟ್ಟಿ ಯವರು ಸನ್ಮಾನ ಪತ್ರ ವಾಚಿಸಿದರು.

ಯು.ಎ.ಇ. ಬಂಟ್ಸ್ ಸ್ಥಾಪಕರು ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶ್ರೀ ಶಂಕರ್ ಶೆಟ್ಟಿ ಮತ್ತು ಶ್ರೀಮತಿ ಮಲ್ಲಿಕಾ ಶೆಟ್ಟಿ ದಂಪತಿಗಳನ್ನು ಸನ್ಮಾನಿ ಗೌರವಿಸಲಾಯಿತು.

 

ಕ್ರೀಯಾತ್ಮಕ ಕಲಾ ನಿರ್ದೇಶಕ ಶ್ರೀ ಬಿ. ಕೆ. ಗಣೇಶ್ ರೈಯವರಿಗೆ ಸನ್ಮಾನ
ಯು.ಎ.ಇ.ಯಲ್ಲಿ ಕಳೆದ ಎರಡು ದಶಕಗ ಳಿಂದ ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಬಿ. ಕೆ. ಗಣೇಶ್ ರೈಯವರು ಯು.ಎ.ಇ. ಬಂಟ್ಸ್ ಗೆ ಆಕರ್ಷಕ ಲಾಂಚನ ವಿನ್ಯಾಸ, ವೇದಿಕೆಯ ಚಿತ್ರಪಟ ವಿನ್ಯಾಸ, ಡಿಜಿಟಲ್ ಡಿಸ್ ಪ್ಲೆ ವಿನ್ಯಾಸ, ಯು.ಎ.ಇ. ಬಂಟ್ಸ್ ಡೈರಕ್ಟರಿ ವಿನ್ಯಾಸ, ಸಾಮೂಹಿಕ ಸತ್ಯನಾರಾಯಣ ಪೂಜಾ ವೇದಿಕೆವಿನ್ಯಾಸ, ರಕ್ತದಾನ ಶಿಬಿರ ಆಯೋಜನೆ, ಎಲ್ಲಾ ಕಾರ್ಯಕ್ರಮಗಳ ಆಮಂತ್ರಣ ವಿನ್ಯಾಸ ಹಾಗೂ ಸನ್ಮಾನ ಪತ್ರಗಳ ವಿನ್ಯಾಸ ಹಾಗೂ ಯು.ಎ.ಇ. ಬಂಟ್ಸ್ ನ ಎಲ್ಲಾ ಕಾರ್ಯಕ್ರಮಗಳ ಲೇಖನಗಳನ್ನು ಮಾಧ್ಯಮಗಳಲ್ಲಿ ಪ್ರಕಟಣೆಗಳ ಮೂಲಕ ಯು.ಎ.ಇ. ಬಂಟ್ಸ್ ನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯಾವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿರುವುದನ್ನು ಅಭಿನಂದಿಸಿ, ಧರ್ಮ ಪತ್ನಿ, ಶ್ರೀಮತಿ ಮಂಜುಳಾ ಗಣೇಶ್ ರೈ, ಮಕ್ಕಳು ಮೋನಿಶ್ ರೈ ಮತ್ತು ಐಶ್ವರ್ಯ ರೈ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಸಂಪತ್ ಶೆಟ್ಟಿ ಯವರು ಸನ್ಮಾನ ಪತ್ರ ವಾಚಿಸಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಹರೈನ್ ನಿಂದ ಆಗಮಿಸಿದ ಶ್ರೀ ಅಮರನಾಥ್ ಶೆಟ್ಟಿ ಶ್ರೀ ಆಸ್ಟೀನ್ ಸಂತೋಷ್, ಶ್ರೀ ಪ್ರದೀಪ್ ಶೆಟ್ಟಿ ಹಾಗೂ ತಂಡದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಯು.ಎ.ಇ. ಬಂಟ್ಸ್ ಕಾರ್ಯಕ್ರಮಕ್ಕೆ ಸಹಕಾರ ನೀಡಿರುವ ಬಿಲ್ಲವಾಸ್ ದುಬಾಯಿ ಅಧ್ಯಕ್ಷರಾದ ಶ್ರೀ ಸತೀಶ್ ಪೂಜಾರಿ ಯವರ್ನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸ್ನೇಹಮಿಲನ ಕಾರ್ಯಕ್ರಮವನ್ನು ನೇರ ಪ್ರಸಾರದ ಮೂಲಕ ವಿಶ್ವಕ್ಕೆ ಮುಟ್ಟಿಸಿರುವ “ನಮ್ಮ ಕುಡ್ಲ” ವಾಹಿನಿಯ ಶ್ರೀ ಸುಜಿತ್ ಲಯೊನಿಲ್ ಹಾಗೂ ಮಾಧ್ಯಮ ಕ್ಷೇತ್ರದ ಇನ್ನಿತರ ಪ್ರತಿನಿಧಿಗಳನ್ನು ಗೌರವಿಸಲಾಯಿತು.

ಗೌರವ ಅತಿಥಿಯಾಗಿ ಆಗಮಿಸಿದ ಶ್ರೀ ರಿಶಬ್ ಶೆಟ್ಟಿಯವರ ನೂತನ ಚಿತ್ರದ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗಾಯಕ ನಿಶಾನ್ ರೈ ಮತ್ತು ಕಾರ್ಯಕ್ರಮ ನಿರೂಪಕ ಶ್ರೀ ನಿತೇಶ್ ಶೆಟ್ಟಿಯವರನ್ನು ಸನ್ಮಾನಿ ಗೌರವಿಸಲಾಯಿತು.

ಯು.ಎ.ಇ. ಬಂಟ್ಸ್ ಶ್ರೀ ಸತ್ಯನಾರಾಯಣ ಪೂಜೆಯ ಜವಬ್ಧಾರಿಯನ್ನು ವಹಿಸಿಕೊಂಡಿರುವ ಶ್ರೀ ರವಿರಾಜ್ ಶೆಟ್ಟಿ ದಂಪತಿಗಳು, ರಕ್ತದಾನ ಶಿಬಿರದ ರುವಾರಿ ಶ್ರೀ ಉದಯ ಶೆಟ್ಟಿ ದಂಪತಿಗಳು, ಕ್ರೀಡಾ ಕೂಟದ ವ್ಯಸ್ಥೆ ಯ ಜವಬ್ಧಾರಿಯ ಶ್ರೀ ಕಿರಣ್ ಶೆಟ್ಟಿ ದಂಪತಿಗಳು ಹಾಗೂ ವೇದಿಕೆಯ ಹಿಂಬದಿಯ ಶಕ್ತಿಗಳಾದ ಶ್ರೀ ವಾಸು ಶೆಟ್ಟಿ, ಶ್ರೀ ವಿಶ್ವನಾಥ್ ಶೆಟ್ಟಿ ಇವರುಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು

ಆಶಾ ಜಯರಾಂ ರೈ ನಿರ್ದೇಶನದ “ಗುಂಗುರು’ ನೃತ್ಯ ಪ್ರದರ್ಶನ, ಸೀಮಾ ಶೆಣವಾ ನಿರ್ದೇಶನದ “ರಕ್ತಬೀಜಾಸುರ ವದಾ” ನೃತ್ಯ ರೂಪಕ, ಡಾ| ಪ್ರೀತಿ ಶೆಟ್ಟಿ ನಿರ್ದೇಶನದ ಅಭುಧ್ಯಯ ತಂಡದ ನೃತ್ಯ, ಸುಶ್ಮಾ ಪ್ರಕಾಶ್ ಶೆಟ್ಟಿ ನಿರ್ದೇಶನದ ಕಾಳಿಕಾ ತಾಂಡವ ನೃತ್ಯ, ನಿತ್ಯಾನಂದ ಶೆಟ್ಟಿ ನಿರ್ದೇಶನದ ಕ್ರಿಕೆಟ್ ನೃತ್ಯ ಕಾರ್ಯಕ್ರಮ ನಡೆಯಿತು.

ಮಕ್ಕಳ ಛದ್ಮ ವೇಷ ಸ್ಪರ್ಧಾ ವಿಜೆತರಿಗೆ ಬಹುಮಾನ ವಿತರಣೆ

7 ರಿಂದ 12 ವಯೋಮಿತಿ – ಪ್ರಥಮ – ಸಾನ್ವಿ ಸುಕುಮಾರ್ ಶೆಟ್ಟಿ, ದ್ವಿತೀಯಾ – ಸ್ಥೈರ್ಯ ಕರುಣಾಕರ್ ಶೆಟ್ಟಿ, ತೃತಿಯ -ಮನಸ್ವಿ ಮಹೇಶ್ ಶೆಟ್ಟಿ
12 ರಿಂದ 16 ವಯೋಮಿತಿ – ಪ್ರಥಮ – ಸಾಹನಿಯ ಸದಾನಂದ ಶೆಟ್ಟಿ, ದ್ವಿತೀಯಾ – ಭೌತಿಕ್ ಧನ್ಪಾಲ್ ಶೆಟ್ಟಿ, ತೃತಿಯಾ – ಸ್ಪರ್ಶಾ ಶೆಟ್ಟಿ.

ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಅದೃಷ್ಟ ಚೀಟಿ ವಿಜೇತರಿಗೆ ಬಹುಮಾನ ನೀಡಿದ ನಂತರ ಶ್ರೀ ಸರ್ವೋತ್ತಮ ಶೆಟ್ಟಿಯವರು ಸರ್ವರಿಗೂ ವಂದನೆ ಸಲ್ಲಿಸಿದರು.

ಬಿ. ಕೆ. ಗಣೆಶ್ ರೈ – ಯು.ಎ.ಇ.
ಛಾಯ ಚಿತ್ರಗಳು :ಸಮೀಹಾ ಸ್ಟುಡಿಯೊ ಅಬುಧಾಬಿ

Comments are closed.