ಮಸ್ಕತ್ ಒಮಾನ್: ಅನಿವಾಸಿ ಭಾರತೀಯ ಕರಾವಳಿ ಮುಸ್ಲಿಮ್ ಬ್ಯಾರಿ ಸಹೋದರರು ಇತ್ತೀಚೆಗೆ ಮಸ್ಕತ್’ಗೆ ವೈಯುಕ್ತಿಕವಾಗಿ ಭೇಟಿ ನೀಡಿದ “ಎಂ. ಅಹ್ಮದ್ ಬಾವ ಪಡೀಲ್, ಮಂಗಳೂರು”ರವರನ್ನು ಸನ್ಮಾನಿಸಿ ಹಾರೈಸಿ ಬೀಳ್ಕೊಟ್ಟರು.
“ಎಂ ಅಹ್ಮದ್ ಬಾವಾ ಪಡೀಲ್, ಮಂಗಳೂರು” ಇವರು ಹಾಲಿ ದಕ್ಷಿಣ ರೈಲು ಪಾಲ್ಘಾಟ್ ವಿಭಾಗದ ಸದಸ್ಯರೂ, ಮಾನವ ನೈತಿಕತೆ ಸಂಸ್ಥೆ ಸಮಿತಿಯ ಸದಸ್ಯರೂ, ಮುಸ್ಲಿಂ ಸೆಂಟ್ರಲ್ ಕಮಿಟಿ ಉಡುಪಿ ವಿಭಾಗದ ಕಾರ್ಯದರ್ಶಿಗಳೂ, ಮಾಜಿ ಎ.ಪಿ.ಎಂ.ಸಿಯ ನಿರ್ದೇಶಕರೂ, ಮಾಜಿ ಪುರಸಭಾ ಕೌನ್ಸಿಲರ್ ಅದೇ ರೀತಿ ಹಲವಾರು ಸಂಸ್ಥೆಗಳಲ್ಲಿ ದುಡಿದ ಮತ್ತು ದುಡಿಯುತ್ತಿರುವ ಕರಾವಳಿ ಮುಸ್ಲಿಮರ ಹೆಮ್ಮೆಯಾಗಿರುತ್ತಾರೆ.
ಈ ಸನ್ಮಾನ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮೋನಬ್ಬ ಎರ್ಮಾಳ್, ಅಬ್ಬಾಸ್ ಉಚ್ಚಿಲ, ಮನ್ಸೂರ್ ವೊಲ್ಲಿ ಮಂಗಳೂರ, ಹಮೀದ್ ಪಡೀಲ್, ಸಲಾಂ ಹಾಜಿ ಮಂಗಳೂರು, ಶಂಶೀರ್ ಅಹ್ಮದ್ ಮಂಗಳೂರು,ಶಾಕೀರ್ ಮಂಗಳೂರು,ಅಶ್ರಫ್ ಸುಲೈಮಾನ್ ಮಿತ್ತೂರು,ಝಾಕಿರ್ ಬೆಳ್ತಂಗಡಿ,ಹನೀಫ್ ಉಚ್ಚಿಲ್,ನಿಯಾಝ್ ಪಡೀಲ್,ಫಾರೂಕ್ ಉಚ್ಚಿಲ್,ಅಹ್ಮದ್ ಅಬೂ ಸಾಲಿಹ್ ಮೂಡಬಿದ್ರೆ ಉಪಸ್ಥಿತರಿದ್ದರು.
ವರದಿ: ಅಬ್ದುಲ್ ಮುಬಾರಕ್ ಕಾರಾಜೆ
Comments are closed.