ಗಲ್ಫ್

ದುಬಾಯಿಯಲ್ಲಿ ಭಕ್ತಿಪೂರ್ವಕವಾಗಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Pinterest LinkedIn Tumblr

Photo: Ashok Belman

ದುಬಾಯಿ ಸಿಂಧಿ ಸೆರೊಮೋನಿಯಲ್ ಸಭಾಂಗಣದಲ್ಲಿ ಡಿಸೆಂಬರ್ 8ನೇ ತಾರೀಕು ಶುಕ್ರವಾರ ಬೆಳಿಗ್ಗೆ 9.00 ಗಂಟೆಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಭಕ್ತಿಪೂರ್ವಕವಾಗಿ ನಡೆದು ಭಕ್ತಾಧಿಗಳು ಪಾಲ್ಗೊಂಡು ಪುನೀತರಾದರು.

ಯು.ಎ.ಇ. ಯಲ್ಲಿ ನೆಲೆಸಿರುವ ವಿವಿಧ ಜಾತಿ ಸಮುದಾಯದ ಪ್ರತಿನಿದಿಗಳು ಒಟ್ಟು ಸೇರಿ ಕಳೆದ ಎಂಟು ವರ್ಷಗಳಿಂದ ಯಶಸ್ವಿಯಾಗಿ ಆಚರಿಸಿಕೊಂಡು ಬರುತ್ತಿದ್ದು ಈ ಬಾರಿ ಒಂಬತ್ತನೆ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವಿದಿವಿಧಾನ ಕೈಂಕರ್ಯವನ್ನು ಪುರೋಹಿತ ಶ್ರೀ ರಘುಭಟ್ ನಡೆಸಿಕೊಟ್ಟರು. ಸರ್ವರ ಪರವಾಗಿ ಶ್ರೀಮತಿ ಉಷಾ ಆನಂದ್ ಮತ್ತು ಶ್ರೀ ಆನಂದ್ ಸಾಲಿಯಾನ್ ದಂಪತಿಗಳು ಪೂಜೆಯಲ್ಲಿ ಆಸೀನರಾಗಿ ಪೂಜಾಕಾರ್ಯದಲ್ಲಿ ಪಾಲ್ಗೊಂಡು ಸೇವೆಯನ್ನು ಸಮರ್ಪಿಸಿದರು.

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಪೂರ್ವತಯಾರಿ, ಪೂಜೆಯು ಸಾಂಗವಾಗಿ ನೆರವೇರಿತು. ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿಯ ಸುಮಂಗಲೆಯರು ಪೂಜಾಕಾರ್ಯದಲ್ಲಿ ಬೆಂಬಲ, ಸಹಕಾರ ನೀಡಿದರು.

ಪೂಜಾ ಸಭಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳು ತೀರ್ಥಪ್ರಸಾದವನ್ನು ಸ್ವೀಕರಿಸಿ ನಂತರ ಮಹಾಪ್ರಸಾದವನ್ನು ಸ್ವೀಕರಿಸಿದರು.

Comments are closed.