Photo: Uday H.K.Dubai
ಅಜ್ಮಾನ್: ‘ದೇವಾಡಿಗಾಸ್ ದುಬೈ’ ಆಶ್ರಯದಲ್ಲಿ ಶುಕ್ರವಾರದಂದು ಅಜ್ಮಾನ್’ನ ಬೀಚ್ ಹೋಟೆಲ್’ನಲ್ಲಿ 24ನೇ ದೇವಾಡಿಗಾಸ್ ಕುಟುಂಬ ಸಮ್ಮಿಲನ(Family Get together) ಕಾರ್ಯಕ್ರಮ ಆಯೋಜಿಸಲಾಗಿತ್ತು.
ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಸಂಗೀತ, ಡ್ಯಾನ್ಸ್, ವಿವಿಧ ಆಟೋಟಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಸಖತ್ ಖುಷಿ ಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷರುಗಳಾದ ಧರ್ಮಪಾಲ್ ದೇವಾಡಿಗ, ಹೆಚ್.ಮೋಹನ್ ದಾಸ್, ಗೋಪಾಲ ಮೊಯ್ಲಿ, ಎಸ್.ಕೆ. ಶ್ರೀಯಾನ್, ದುಬೈ ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ ಹಾಗು ‘ದೇವಾಡಿಗಾಸ್ ದುಬೈ’ಯ ಗೌರವಾಧ್ಯಕ್ಷರು ಆಗಿರುವ ಹರೀಶ್ ಶೇರಿಗಾರ್, ಪೋಷಕರಾಗಿರುವ ನಾರಾಯಣ್ ಎಂ.ದೇವಾಡಿಗ, ಆನಂದ ದೇವಾಡಿಗ ಭಾಗವಹಿಸಿದ್ದರು.
‘ದೇವಾಡಿಗಾಸ್ ದುಬೈ’ಯ ಅಧ್ಯಕ್ಷ ದಿನೇಶ್ ದೇವಾಡಿಗರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ದೇವಾಡಿಗಾಸ್ ದುಬೈಯ ಸ್ಥಾಪಕ ಸದಸ್ಯ ದಿವಂಗತ ಸುಂದರ ದೇವಾಡಿಗರ ಧರ್ಮ ಪತ್ನಿ ಸಿಂಧು ಎಸ್.ದೇವಾಡಿಗ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ಹರೀಶ್ ಶೇರಿಗಾರ್ ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್, ಮಲ್ಲಿಕಾ ನಾರಾಯಣ್, ರೇಖಾ ಬೋಳಾರ್, ಪದ್ಮ ಸಂಜಯ್, ಶಾಂತ ಗೋಪಾಲ ಮೊಯ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ UAE ಯ ಖ್ಯಾತ ಗಾಯಕ ಹರೀಶ್ ಶೇರಿಗಾರ್, ಅಕ್ಷತಾ ರಾವ್, ಪ್ರಮೋದ್ ಶ್ರೀಯಾನ್, ಸುರೇಶ್ ಸಿ.ದೇವಾಡಿಗ, ವಿನಯ, ಪ್ರಶಾಂತ್ ಅವರು ತಮ್ಮ ಸುಮಧುರ ಕಂಠದ ಮೂಲಕ ಹಾಡಿ ಎಲ್ಲರನ್ನು ರಂಜಿಸಿದರು. ಜೊತೆಗೆ ಶ್ವೇತಾ ಎಸ್.ಶೇರಿಗಾರ್, ದೀಕ್ಷಿತ್ ಆಚಾರ್ಯ ತಮ್ಮ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದ ಮಧ್ಯೆ ACME ಮೂವೀಸ್ ಇಂಟರ್ನ್ಯಾಶನಲ್ ಲಾಂಛಾನದಲ್ಲಿ ಖ್ಯಾತ ನಿರ್ದೇಶಕ ಕೂಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ದುಬೈಯ ಖ್ಯಾತ ಉದ್ಯಮಿ ಹಾಗೂ ಪ್ರಸಿದ್ದ ಗಾಯಕ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಅವರ ನಿರ್ಮಾಣದ ಚೊಚ್ಚಲ ಕಾಣಿಕೆ “ಮಾರ್ಚ್ 22” ಕನ್ನಡ ಚಲನ ಚಿತ್ರದ ಕುರಿತು ಹರೀಶ್ ಶೇರಿಗಾರ್ ಮಾತನಾಡಿದರು.
ಈ ಮಧ್ಯೆ ನೆರೆದವರಿಗಾಗಿ ಆಯೋಜಿಸಲಾಗಿದ್ದ ವಿವಿಧ ರೀತಿಯ ಆಟಗಳನ್ನು ಹರೀಶ್ ಶೇರಿಗಾರ್ ಉತ್ತಮವಾಗಿ ನಡೆಸಿಕೊಟ್ಟರು. ಅವರಿಗೆ ನಿತ್ಯಾನಂದ ಸಹಕರಿಸಿದರು. ಆರಂಭದಲ್ಲಿ ಶೆಲಿನಾ ಲಕ್ಶ್ಮಿದಾಸ್ ಪ್ರಾರ್ಥನೆ ಹಾಡನ್ನು ಹಾಡಿದರು. ‘ದೇವಾಡಿಗಾಸ್ ದುಬೈ’ಯ ಅಧ್ಯಕ್ಷ ದಿನೇಶ್ ದೇವಾಡಿಗ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಶ್ಮಿದಾಸ್ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಶೇರಿಗಾರ್ ವಂದಿಸಿದರು.
Comments are closed.