ಗಲ್ಫ್

ಜುಲೈ 3 ರಂದು ಕೆ ಐ ಸಿ ದುಬೈ ವತಿಯಿಂದ ಬೃಹತ್ ಇಫ್ತಾರ್ ಕೂಟ ಆಮಂತ್ರಣ ಪತ್ರ ಬಿಡುಗಡೆ 

Pinterest LinkedIn Tumblr

22

ದುಬೈ : ಹಲವಾರು ವರ್ಷಗಳಿಂದ ಯು ಎ ಇ ಯಲ್ಲಿ ವಿವಿದ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪರಿಚಿತದಲ್ಲಿರುವ ಕುಂಬ್ರ ಜಾಮಿಅ ಅಲ್ ಕೌಸರ್ ಶರೀಅತ್ ಕಾಲೇಜ್ ಇದರ ಪೋಷಕ ಮೇಲುಸ್ತುವಾರಿ ಸಮಿತಿ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯು ಎ ಇ ಅಧೀನ ದುಬೈ ಸಮಿತಿ ವತಿಯಿಂದ ಬೃಹತ್ ಇಫ್ತಾರ್ ಕೂಟ ಕಾರ್ಯಕ್ರಮವು ಜುಲೈ 3 ರಂದು ದುಬೈ ಆಪಲ್ ಇಂಟರ್ ನ್ಯಾಷನಲ್ ಸ್ಕೂಲ್ ಕಿಸೈಸ್ ನಲ್ಲಿ ನಡೆಯಲಿದ್ದು ಆಮಂತ್ರಣ ಪತ್ರಿಕೆಯನ್ನು ಇಫ್ತಾರ್ ಸಮಿತಿ ಚೈರ್ಮನ್ ಅಬ್ದುಲ್ ಖಾದರ್ ಬೈತಡ್ಕ ರವರು ಮಾದ್ಯಮಗಳಿಗೆ ಬಿಡುಗಡೆ ಗೊಳಿಸಿದರು.

ನಂತರ ಕಾರ್ಯಕ್ರಮದ ಬಗ್ಗೆ ವಿವರಿಸುತ್ತಾ ಮಾತನಾಡಿದ ಅವರು , ವಿವಿದ ಕ್ಷೇತ್ರಗಳ ಹಲವಾರು ಪ್ರತಿಸಿಧಿಗಳನ್ನು ಒಳಗೊಂಡ ಬೃಹತ್ ಇಫ್ತಾರ್ ಕೂಟ ಕಾರ್ಯಕ್ರಮವು ಅಸರ್ ನಮಾಝಿನ ಬಳಿಕ ಪ್ರಾರಂಭ ಗೊಳ್ಳಲ್ಲಿದ್ದು ಕುಂಬೋಳ್ ಮನೆತನದ ಸುಪ್ರಸಿದ್ದ ಅಸಯ್ಯದ್ ಅಲಿ ತಂಘಲ್ ಕುಂಬೋಳ್ ರವರು ದುವಾ ನೆರವೇರಿಸಲಿದ್ದಾರೆ. ಕೆ ಐ ಸಿ ದುಬೈ ಸಮಿತಿ ಅಧ್ಯಕ್ಷರಾದ ಜನಾಬ್ ಅಶ್ರಫ್ ಖಾನ್ ಮಾಂತೂರ್ ರವರ ಅಧ್ಯಕ್ಷತೆಯಲ್ಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಅನಿವಾಸಿ ಉದ್ಯಮಿ ಜನಾಬ್ ಹಾಜಿ ಅಬ್ದುಲ್ ಖಾದರ್ ಅಮ್ಚಿನದ್ಕ ( ಎಂ ಡಿ ಆರ್ ಎಂ ಗ್ರೂಪ್ ಆಫ್ ಕಂಪೆನೀಸ್) ರವರು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ,

ಅಲ್ಲದೆ ಕಾರ್ಯಕ್ರಮದಲ್ಲಿ ಶಂಸುದ್ದೀನ್ ಹನೀಫಿ ಮರ್ದಾಳ ರವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದು , ಫೈಝಲ್ ರಹ್ಮಾನಿ ಉಸ್ತಾದ್ ಬಾಯಾರ್ , ಹಾಗೂ ಮಿದ್ಲಾಜ್ ರಹ್ಮಾನಿ ಉಸ್ತಾದ್ ಮಾತೂಲ್ ರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆ ಐ ಸಿ ಗೌರವಾಧ್ಯಕ್ಷರಾದ ಅಸಯ್ಯದ್ ಅಸ್ಕರಲಿ ತಂಘಲ್ ಕೊಲ್ಪೆ , ಕೆ ಐ ಸಿ ಕೇಂದ್ರ ಸಮಿತಿ ಅದ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ , ದಾರುನ್ನೂರು ಎಜುಕೇಶನ್ ಸೆಂಟರ್ ಕಾಶಿಪಟ್ನ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಲ್ತಾಫ್ ಸಲೀಂ ಪರಂಗಿಪೇಟೆ ಯವರು ಗಣ್ಯ ಉಪಸ್ಥಿತರಾಗಿ ಆಗಮಿಸಲಿದ್ದು , ,ಮುಖ್ಯ ಅತಿಥಿ ಗಳಾಗಿ ಕೆ ಐ ಸಿ ಖತಾರ್ ಸಮಿತಿ ಗೌರವ ಸಲಹೆ ಗಾರರಾದ , ಜನಾಬ್ ಇಬ್ರಾಹಿಮ್ ಹಾಜಿ ಮಂಡೆಕೋಲು , ಹಾಜಿ ಅಬ್ದುಲ್ಲಾ ಮೋನು ಮೊಹಿಯುದ್ದೀನ್ ಮಂಗಳೂರು , ಅಬ್ದುಲ್ಲಾ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಜನಾಬ್ ಪಿ ಟಿ ಅಬ್ದುಲ್ ರಹ್ಮಾನ್ , ಜನಾಬ್ ಅಬ್ದುಲ್ಲಾ ಮದುಮೂಲೆ ( ಝಾಎದ್ ಫೌಂಡೆಶನ್ ಅಬುಧಾಬಿ) , ಜನಾಬ್ ಬಷೀರ್ ಕಿನ್ನಿಂಗಾರ್ ( ಆಡಳಿತಾಧಿಕಾರಿ ಸಿಸ್ ಟೆಕ್ನಿಕ್ ಸೊಲ್ಯೂಶನ್ ಯು ಎ ಇ ) ಜನಾಬ್ ಶಾಕಿರ್ ಹುಸೈನ್ ( ಎಂ ಡಿ ಜಿನೆಕ್ಸ್ ಸಿಸ್ಟೆಮ್ಸ್ ಐಟಿ ಸೊಲ್ಯುಶನ್ ದುಬೈ ) ಜನಾಬ್ ಬಷೀರ್ ಬಂಟ್ವಾಳ (ಆಸ್ಟರ್ ಗ್ರೂಪ್ಸ್ ಯುಎಇ ) ಜನಾಬ್ ಮೊಹಮ್ಮದ್ ಖಾಲಿದ್ ( ಲಾವೆಂಡರ್ ಶಿಪ್ಪಿಂಗ್ ಕಂಪೆನಿ ದುಬೈ) ಮೊದಲಾದವರು ಆಗಮಿಸಲಿದ್ದು ಕೆ ಐ ಸಿ ವಿಧ್ಯಾ ಸಂಸ್ಥೆಯ ಪೋಷಕರೂ ಆದ ತಾವೆಲ್ಲರೂ ಹೆಚ್ಹಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸುವಂತೆ ಕೆ ಐ ಸಿ ಇಫ್ತಾರ್ ಕಮಿಟಿ ಚೈರ್ಮಾನ್ ಅಬ್ದುಲ್ ಖಾದರ್ ಬೈತಡ್ಕ , ಕಾರ್ಯದರ್ಶಿ ಶರೀಫ್ ಕಾವು ಹಾಗೂ ಪಧಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಅಸರ್ ನಮಾಝಿನ ಬಳಿಕ ರಮಲಾನ್ ಪ್ರಭಾಷಣ ನಡೆಯಲಿದ್ದು ಮಹಿಳೆಯರಿಗಾಗಿ ಪ್ರತ್ಯೇಕ ಆಸನದ ವ್ಯವಸ್ತೆ ಕಲ್ಪಿಸಲಾಗಿದೆ.

ಉಚಿತ ಬಸ್ ಸೇವೆ , ಕಾರ್ಯಕ್ರಮ  ಯಶಸ್ವೀ ಗೊಳಿಸುವಂತೆ ಕೆ ಐ ಸಿ ರಾಷ್ಟ್ರೀಯ ಸಮಿತಿ ಕರೆ

ದುಬೈ : ದುಬೈ ಆಪಲ್ ಇಂಟರ್ ನ್ಯಾಷನಲ್ ಸ್ಕೂಲ್ ಅಲ್ ಕಿಸೈಸ್ ನಲ್ಲಿ ಕೆ ಐ ಸಿ ದುಬೈ ಸಮಿತಿ ನಡೆಸಲು ಉದ್ದೇಶಿಸಿರುವ ಬೃಹತ್ ಇಫ್ತಾರ್ ಕೂಟ ಕಾರ್ಯಕ್ರವನ್ನು ಯಶಸ್ವೀ ಗೊಳಿಸುವಂತೆ ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ , ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ ಹಾಗೂ ಅಧೀನ ಸಮಿತಿ ಪಧಾಧಿಕಾರಿಗಳು ವಿನಂತಿಸಿ ಕೊಂಡಿದ್ದಾರೆ. ಮಹಿಳೆಯರೀಗಾಗಿ ಪ್ರತ್ಯೇಕ ಆಸನ ವ್ಯವಸ್ತೆಯೊಂದಿಗೆ ಅಸರ್ ನಮಾಝಿನ ಬಳಿಕ ಪ್ರಾರಂಭ ಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ವಿವಿದ ಕ್ಷೇತ್ರಗಳ ಹಲವಾರು ನೇತಾರರು ಭಾಗವಹಿಸಲಿದ್ದು ರಮಲಾನ್ ಪ್ರಭಾಷನವು ನಡೆಯಲಿರುವುದರಿಂದ ಅನಿವಾಸಿ ದೀನೀ ಸ್ನೇಹಿಗಳಾದ ತಾವೆಲ್ಲರೂ ಕ್ಲಪ್ತ ಸಮಯಕ್ಕೆ ಹೆಚ್ಹಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೆ ಐ ಸಿ ಕೇಂದ್ರ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿ ಕೊಂಡಿದೆ. ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ದೇರಾ ನೈಫ್ ಹತ್ತಿರದಿಂದ ಹಾಗೂ ಬಾರ್ ದುಬೈ ಅಲ್ ಫರ್ದಾನ್ ಹತ್ತಿರದಿಂದ ಉಚಿತ ಬಸ್ ವ್ಯವಸ್ತೆ ಮಾಡಲಾಗಿದ್ದು ದೀನೀ ಸ್ನೇಹಿಗಳು ಸದುಪಯೋಗಪಡಿಸಿಕೊಂಡು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗಿಗಲಾಗುವಂತೆ ಸಂಘಟಕರು ತಿಳಿಸಿರುತ್ತಾರೆ.

ದೇರಾ ನೈಫ್ ಹತ್ತಿರ ದಿಂದ ಸಂಜೆ 4.30 ಗಂಟೆಗೆ ಸರಿಯಾಗಿ ಹೊರಡಲಿದ್ದು ಸಂಪರ್ಕಿಸ ಬೇಕಾದ ಸಂಖ್ಯೆ ಅನ್ವರ್ ಮಣಿಲ :  050 808 6595        ರಹಿಮಾನ್ ಪೆರಾಜೆ  055 737 8559
ಬಾರ್ ದುಬೈ ಅಲ್ ಫರ್ದಾನ್  ಹತ್ತಿರದಿಂದ ಸಂಜೆ 4.30 ಗಂಟೆ ಗೆ ಸರಿಯಾಗಿ ಹೊರಡಲಿದ್ದು ಸಂಪರ್ಕಿಸಬೇಕಾದ ಸಂಖ್ಯೆ ಅಶ್ರಫ್ ಅರ್ಥಿಕೆರೆ : 050 217 1039.

Write A Comment