ಫೋಟೋ: ಅಶೋಕ್ ಬೆಳ್ಮಣ್
ದುಬೈ, ಮೇ 24: ಕನ್ನಡಿಗರು ದುಬೈ ಇವರ ನೇತೃತ್ವದಲ್ಲಿ ದುಬೈಯ ತುಂಬೆ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮೇ 22ರ ಶುಕ್ರವಾರದಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ನಡೆಯಿತು.
ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಸುಮಾರು 300ಕ್ಕೂ ಅಧಿಕ ಮಂದಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು, ಇದರ ಸದುಪಯೋಗವನ್ನು ಪಡೆದುಕೊಂಡರು.
ದುಬೈಯ ಎಂಸ್ಕ್ವಾರ್ ಎಂಜಿನಿಯರಿಂದ್ ಕನ್ಸಲ್ಟೆಂಟ್ನ ಆಡಳಿತ ನಿರ್ದೇಶಕ ಮೊಹಮ್ಮದ್ ಮುಸ್ತಫಾ, ತುಂಬೆ ಆಸ್ಪತ್ರೆಯ ಆಡಳಿತ ನಿರ್ದೇಶಕ ಮೊಯಿದಿನ್ ತುಂಬೆಯವರಿಂದ ಹೂಗುಚ್ಚ ಸ್ವೀಕರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಕೊಂಕಣ್ಸ್ನ ಅಧ್ಯಕ್ಷ ಜೇಮ್ಸ್ ಮೆಂಡೋನ್ಸಾ, ದುಬೈ ಬಿಲ್ಲವಾಸ್ನ ಅಧ್ಯಕ್ಷ ಸತೀಶ್ ಪೂಜಾರಿ, ಮೆರಿಟ್ ಫ್ರೈಟ್ ಸಿಸ್ಟಮ್ನ ಜೋಸೆಫ್ ಮಥಾಯಿಸ್, ಕನ್ನಡಿಗರು ದುಬೈಯ ಅಧ್ಯಕ್ಷ ಸದನ್ದಾಸ್, ಉಮಾ ವಿದ್ಯಾಧರ್ ಹಿರೇಮಠ್, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ನಟರಾಜ್ ಚಿಕ್ಕಿಲಿಂಗಣ್ಣ, ದೀಪಕ್ ಸೋಮಶೇಖರ್ ಸೇರಿದಂತೆ ಮತ್ತಿತರರು ಹಾಜರಿದ್ದರು.