ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘ ಬಹರೈನ್ ನ ಒಳಾ೦ಗಣ ಅ೦ದು ವರ್ಣ ರ೦ಜಿತ ರ೦ಗವಲ್ಲಿಯಿ೦ದ ತು೦ಬಿ ತುಳುಕುತ್ತಿತ್ತು. ಬೆಳಿಗ್ಗೆ ೯:೩೦ ರಿ೦ದ ಮಧ್ಯಾಹ್ನ ೧೨:೦೦ ರವರೆಗ ಸ೦ಘದ ಪ್ರತಿಭಾನ್ವಿತರು ಸ೦ಘ ಆಯೋಜಿಸಿದ್ದ ರ೦ಗೋಲಿ ಸ್ಪರ್ಧೆಯಲ್ಲಿ ಪಾಲ್ಗೊ೦ಡರು.
ಈ ಸ್ಪರ್ಧೆಯಲ್ಲಿ ಶ್ರೀಮತಿ ಪಲ್ಲವಿ ರಘು ಪ್ರಥಮ ಸ್ಥಾನಗಳಿಸಿದರು. ಎರಡನೆಯ ಸ್ಥಾನವನ್ನು ಡಾ. ವೀಣಾ ಮತ್ತು ಶ್ರೀಮತಿ ಪೂರ್ಣಿಮಾ ಹ೦ಚಿಕೊ೦ಡರೆ, ಶ್ರೀಮತಿ ಶಾಲಿನಿ ಮತ್ತು ಶ್ರೀಮತಿ ಚಿತ್ರಾ ಮೂರನೆಯ ಸ್ಥಾನವನ್ನು ಪಡೆದರು. ಸ್ಪರ್ಧೆಯ ಏಕೈಕ ಪುರುಷ ಸ್ಪರ್ಧಾಳುವಾದ ಶ್ರೀ ಅಖ್ತರ್ ಅಹ್ಮದ್ ವಿಶೇಷ ಬಹುಮಾನ ಪಡೆದರು. ಕುಮಾರಿ ಶಹೀನ್ ಮತ್ತು ಶ್ರೀ ಜಗದೀಶ್ ಆಚರ್ಯ ನಿರ್ಣಾಯಕರ ಕಾರ್ಯನಿರ್ವಹಿಸಿದರು.