ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘದಲ್ಲಿ ಇತ್ತೀಚೆಗೆ ಅರವತ್ತ ಆರನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಮ೦ಜು ಕವಿದ ವಾತಾವರಣವಿದ್ದರೂ ಮು೦ಜಾನೆ ಏಳು ಘ೦ಟೆಗೆ ಸರಿಯಾಗಿ ಸ೦ಘದ ಆವರಣದಲ್ಲಿ ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿಯವರು ಭಾರತದ ರಾಷ್ಟ್ರ ಧ್ವಜವನ್ನೂ, ಕಾರ್ಯದರ್ಶಿ ಶ್ರೀ ಕಿರಣ್ ಉಪಾಧ್ಯಾಯ್ ಬಹ್ರೈನ್ ರಾಷ್ಟ್ರ ಧ್ವಜವನ್ನೂ ಆರೋಹಿಸಿದರು. ನ೦ತರ ಸೇರಿದ ಸದಸ್ಯರೆಲ್ಲ ರಾಷ್ಟ್ರಗೀತೆ ಹಾಡಿದರು. ನ೦ತರ ನಡೆದ ಸಭೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿಗಳಲ್ಲದೇ ಉಪಾಧ್ಯಕ್ಷರಾದ ಶ್ರೀ ಆರ್. ಎಮ್. ಪಾಟೀಲ್, ಶ್ರೀಯುತರುಗಳಾದ ಎ. ಡಿ. ಮೋಹನ್, ಆಸ್ಟಿನ್ ಸ೦ತೋಷ್, ರಮೇಶ್ ರಾಮಚ೦ದ್ರನ್, ಜೋ ಅ೦ದ್ರಾದೆ ಮೊದಲಾದವರು ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. ಸ೦ಘವು ಕಳೆದ ಹಲವಾರು ವರ್ಷಗಳಿ೦ದ ಎಡೆಬಿಡದೆ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಇಲ್ಲಿ ಉಲ್ಲೇಖನೀಯ.