ಅಬುಧಾಬಿ, ನ.18: ಅಬುಧಾಬಿ ಕರ್ನಾಟಕ ಸಂಘದವರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ‘ಮಾತಿನಮಳ್ಳಿ’ ಎಂದೇ ಖ್ಯಾತರಾಗಿರುವ ಹಾಸ್ಯಲೇಖಕಿ ಸುಧಾ ಬರಗೂರು ತಮ್ಮ ಹಾಸ್ಯಭರಿತ ಮಾತಿನ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಾಡುವಂತೆ ಮಾಡಿದರು.
ಅಬುಧಾಬಿಯಲ್ಲಿ ನಡೆದ ಸಮಾರಂಭದಲ್ಲಿ ನಟ ‘ಪ್ರಣಯರಾಜ’ ಶ್ರೀನಾಥ್, ಪದ್ಮಶ್ರೀ ಪುರಸ್ಕೃತ ಉದ್ಯಮಿ ಡಾ.ಬಿ.ಆರ್.ಶೆಟ್ಟಿ, ಯುಎಇ ಎಕ್ಸ್ಚೇಂಜ್ನ ಸುಧೀರ್ ಕುಮಾರ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಎನ್ಎಂಸಿಯ ರವಿ ರೈ, ಹೈಸ್ನ ಗ್ರೂಪ್ನ ರೋನಾಲ್ಡ್ ಪಿಂಟೋ, ಅರಬ್ ಉಡುಪಿ ರೆಸ್ಟೊರೆಂಟ್ನ ಶೇಖರ್ ಶೆಟ್ಟಿ, ಗಣೇಶ್ ರೈ, ಮಲ್ಲಿಕಾರ್ಜುನ ಗೌಡ, ಮನೋಹರ್ ತೋನ್ಸೆ ಸೇರಿದಂತೆ ಮತ್ತಿತರರು ಹಾಜರಿದ್ದರು. ಸುಧಾ ಬರಗೂರು ತಮ್ಮ ಹಾಸ್ಯಭರಿತ ಮಾತುಗಳನ್ನು ಸಮಾರಂಭದ ಮುಂದೆ ಬಿಚ್ಚಿಟ್ಟು, ಜನರಿಗೆ ಉಲ್ಲಾಸದ ತಂಪೆರೆದರು.