ಕನ್ನಡ ವಾರ್ತೆಗಳು

ಪಿಲಿಕುಲದಲ್ಲಿ ಎರಡು ದಿನಗಳ ಮಾವಿನ ಮೇಳಕ್ಕೆ ಚಾಲನೆ

Pinterest LinkedIn Tumblr

Pilikula_mango_mela_1

ಮಂಗಳೂರು,ಮೇ. 21: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಬೆಂಗಳೂರು ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ಮೂಡುಶೆಡ್ಡೆ ಮಂಗಳೂರು ಇದರ ವತಿಯಿಂದ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಪಿಲಿಕುಲದಲ್ಲಿ ಆಯೋಜಿಸಿರುವ “ಮಾವು ಪ್ರದರ್ಶನ ಮತ್ತು ಮಾರಾಟ ಮೇಳ” ಹಾಗೂ “ಪಿಲಿಕುಳ ವಸಂತೋತ್ಸವ -2016” ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ರಾಜ್ಯ ಸಚಿವ ಶ್ರೀ ಕೆ. ಅಭಯಚಂದ್ರ ಉದ್ಘಾಟಿಸಿದರು. 

Pilikula_mango_mela_2 Pilikula_mango_mela_3 Pilikula_mango_mela_4 Pilikula_mango_mela_5 Pilikula_mango_mela_6 Pilikula_mango_mela_7 Pilikula_mango_mela_8 Pilikula_mango_mela_9 Pilikula_mango_mela_10 Pilikula_mango_mela_11 Pilikula_mango_mela_12 Pilikula_mango_mela_13 Pilikula_mango_mela_14

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಬೆಂಗಳೂರು,ಇದರ ಅಧ್ಯಕ್ಷರಾದ ಶ್ರೀಮತಿ ಎಂ ಕಮಲಾಕ್ಷಿ ರಾಜಣ್ಣ, ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀ ಜೆ. ಆರ್ ಲೋಬೋ,ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ. ಎ. ಮೊಹಿಯುದ್ದೀನ್ ಬಾವಾ, ಹಾಗೂ ಜಿಂದಲ್ ಪೋಲಿ ಫಿಲಿಮ್ಸ್ ಲಿಮಿಟೆಡ್‌ನ ಮಾಜಿ ಸಿ.ಇ.ಓ ಮತ್ತು ನಿರ್ದೇಶಕ ಐ. ಚಂದ್ರಕಾಂತ ರಾವ್, ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ವಿದ್ಯಾ ಮತ್ತಿತ್ತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗಣ್ಯರಿಗೆ ಮತ್ತು ಪತ್ರಕರ್ತರಿಗೆ ಮಾವಿನ ಹಣ್ಣನ್ನು ತಿಂದು ಗೊರಟನ್ನು ಎಸೆಯುವಂತಹ ಮೋಜಿನ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಗೊರಟನ್ನು ಅತ್ಯಂತ ದೂರ ಎಸೆದವರಿಗೆ ಬಹುಮಾನವನ್ನು ವಿತರಿಸಲಾಯಿತು..

Comments are closed.