ಕುಂದಾಪುರ: ಅಜ್ಜಿ ಮನೆಗೆಂದು ತೆರಳಿದ ಯುವತಿಯೋರ್ವಳು ಪುನಃ ಮನೆಗೆ ಬಾರದೇ ಕಾಣೆಯಾಗಿರುವ ಘಟನೆ ಕುಂದಾಪುರದ ಕನ್ಯಾನ ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಕಾವೇರಿ (21) ಕಾಣೆಯಾದ ಯುವತಿ.
ಕಾವೇರಿ ಅವರು ಮಂಗಳವಾರ ಬೆಳಿಗ್ಗೆ ಕುಂದಾಪುರ ತಾಲೂಕು ಕನ್ಯಾನ ಗ್ರಾಮದ ಗುಬ್ಕೋಣುನಲ್ಲಿರುವ ಆಕೆಯ ಅಜ್ಜಿಯ ಮನೆಗೆ ಹೋಗಿದ್ದಾರೆ. ಬಳಿಕ ಅಂದು ಮಧ್ಯಾಹ್ನ 1:30 ಗಂಟೆಗೆ ಅಜ್ಜಿಮನೆಯವರ ಬಳಿ ತನ್ನ ಮನೆಗೆ ಹೋಗುವುದಾಗಿ ಹೇಳಿ ಹೋದ ಕಾವೇರಿ ಈವರೆಗೆ ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಮನೆಯವರು ಸತತ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.
ಈ ಬಗ್ಗೆ ಕಾವೇರಿ ಅವರ ಸಹೋದರಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.