ಉಡುಪಿ: ಅಂತಾರಾಜ್ಯ ಕುಖ್ಯಾತ ಕಳ್ಳ ರಾಜಸ್ಥಾನ ಮೂಲಕ ನಾಥೋರಾಮ್ (28) ನನ್ನು ಉಡುಪಿ ಇನ್ಸ್ಪೆಕ್ಟರ್ ಶ್ರೀಕಾಂತ್ ಕೆ. ನೇತೃತ್ವದ ತಂಡ ಬಂಧಿಸಿದೆ.
ದರೋಡೆಗೆ ಸಂಚು ರೂಪಿಸುವುದು, ವಾಹನಗಳ ಕಳವು, ಅಂಗಡಿಗಳಿಗೆ ನುಗ್ಗಿ ಮೊಬೈಲ್, ಎಲೆಕ್ಟ್ರಾನಿಕ್ಸ್ ಸೊತ್ತುಗಳ ಕಳವು ನಡೆಸುತ್ತಿದ್ದ ನಾಥೋರಾಮ್ ಮೇಲೆ ಈವರೆಗೆ ಆಂಧ್ರಪ್ರದೇಶ, ಹೈದರಾಬಾದ್, ಹುಬ್ಬಳ್ಳಿ ಸಹಿತ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 3, ಕಾರ್ಕಳ 1, ಉಡುಪಿ ನಗರ 2 ಪ್ರಕರಣ ಪತ್ತೆಯಾಗಿದೆ. ಇನ್ನೂ ಹಲವು ಪ್ರಕರಣಗಳಲ್ಲಿ ಈತ ಭಾಗಿಯಾಗಿರುವ ಸಾಧ್ಯತೆಗಳಿವೆ.
ಆತ ಕಳವುಗೈಯಲು ಬಳಸುತ್ತಿದ್ದ ಬೈಕನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.