ಮಂಗಳೂರು,ಎ.18: ಬ್ಯಾರಿ ಸಾಹಿತ್ಯ ಕ್ಷೇತ್ರದ ಅನುಪಮ ಸೇವೆಗೆ ಮೂವರು ಸಾಧಕರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಆಕಾಡೆಮಿ ವತಿಯಿಂದ ತಲಾ 50,000ರೂ ನಗದು ಪುರಸ್ಕಾರದ ಜತೆಗೆ2015 ರ ಗೌರವ ಪ್ರಶಸ್ತಿ ಪ್ರದಾನ ಹಾಗೂ ಇಬ್ಬರು ಸಾಧಕರಿಗೆ ತಲಾ 10,000 ರೂ ಮೊತ್ತದ ನಗದು ಪುರಸ್ಕಾರ ಜತೆಗೆ ಪ್ರಶಸ್ತಿ ಪ್ರದಾನ ಮಂಗಳೂರು ಪುರಭವನದಲ್ಲಿ ನಡೆಯಿತು
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ಏಕ ಬಾಷೆ, ಏಕ ಸಂಸ್ಕ್ರತಿಯ ದೇಶವಲ್ಲ ಬಹುತ್ವದ ಭಾರತ ನಮ್ಮದು ಎಂದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ ಮುಹಮ್ಮದ್ ಹನೀಫ್ ಪ್ರಸ್ತಾವಿಸಿದರು. ರಿಜಿಸ್ಟಾರ್ ಉಮರಬ್ಬ ಸ್ವಾಗತಿಸಿದರು. ಸದಸ್ಯೆ ಝೋಹರಾ ಅಬ್ಬಸ್ ವಂದಿಸಿದರು ಬಿ.ಎ ಮೊಹಮ್ಮದ್ ಅಲಿ ನಿರೂಪಿಸಿದರು