ಕನ್ನಡ ವಾರ್ತೆಗಳು

ಸಚಿವ ಅಂಜನೆಯರಿಂದ ಕೊರಗ ಸಮುದಾಯದ ಕಲಾತಂಡಗಳ ವಿಶೇಷ ನೃತ್ಯ ವೀಕ್ಷಣೆ

Pinterest LinkedIn Tumblr

anjaney_bava_visist

ಮೂಲ್ಕಿ, ಏ.16: ರಾಜ್ಯ ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಸಚಿವ ಆಂಜನೇಯ ಗ್ರಾಮ ವಾಸ್ತವ್ಯ ಮಾಡಿದ್ದ ಕೆರೆಕಾಡಿನ ಕೊರಗರ ಕಾಲನಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಮೊಯ್ದೀನ್ ಬಾವಾ ಭೇಟಿ ಕೊಟ್ಟು ಸಮಾಲೋಚನೆ ನಡೆಸಿದರು.

ಆಂಜನೇಯ ಅವರು ನಿನ್ನೆ ಮುಂಜಾನೆ 10 ಗಂಟೆಗೆ ಕೆರೆಕಾಡು ಕೊರಗರ ಕಾಲನಿಗೆ ಭೇಟಿ ಕೊಟ್ಟು ರಾತ್ರಿ ಏಳು ಗಂಟೆಯ ತನಕ ನಿರಂತರ ಸ್ಥಳೀಯ ಕೊರಗ ಸಮುದಾಯದ ಜನರ ಜೊತೆಗೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಕೊರಗ ಕಾಲನಿಗೆ ಬಂಪರ್ ಅನುದಾನ ಘೋಷಿಸಿದ ಸಚಿವರು ರಾತ್ರಿ ಕೊರಗ ಸಮುದಾಯದ ಕಲಾತಂಡಗಳು ಸಾದರ ಪಡಿಸಿದ ವಿಶೇಷ ನೃತ್ಯ ಕಾರ್ಯಕ್ರಮವನ್ನು ವೀಕ್ಷಿಸಿದರು.

ಗ್ರಾಮ ವಾಸ್ತವ್ಯ ಪ್ರದೇಶಕ್ಕೆ ಮೊಯ್ದೀನ್ ಬಾವಾ ಭೇಟಿಕೊಟ್ಟು ಸಚಿವರ ಜೊತೆ ಮಾತುಕತೆ ನಡೆಸಿದರು.

Write A Comment