ಮಂಗಳೂರು,ಏ.13: ಯುವ ಜೋಡಿಯ ಶವ ಅಡ್ಯಾರ್ ರೈಲ್ವೆ ಟ್ರ್ಯಾಕ್ನಲ್ಲಿ ಪತ್ತೆಯಾಗಿದ್ದು, ಈ ಜೋಡಿ ಆತ್ಮಹತ್ಯೆಗೆ ಶರಣಾಗಿರಬೇಕೆಂದು ಶಂಕೀಸಲಾಗಿದೆ.
ಮೃತರನ್ನು ಸ್ಥಳೀಯ ನಿವಾಸಿಗಳಾದ ಕ್ಲೌಡ್ 35 ವಷ೯ ಹಾಗೂ ಜಯಂತಿ 30 ವಷ೯ ಎಂದು ಗುರುತಿಸಲಾಗಿದೆ. ಕ್ಲೌಡ್ ನೀರುಮಾರ್ಗ ಅಂಚೆ ಕಚೇರಿಯಲ್ಲಿ ಫೋಸ್ಟ್ ಮ್ಯಾನ್ ಆಗಿ ಕಾರ್ಯನಿರ್ವಾಹಿಸುತ್ತಿದ್ದು, ಜಯಂತಿ ಅದೇ ಪರಿಸರದ ಎಲೆಕ್ಟ್ರೋನಿಕ್ ಮಳಿಗೆಯೊಂದರಲ್ಲಿ ಸೆಲ್ಸ್ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಸಾವಿಗೆ ಶರಣಾಗಿರುವ ಈ ಜೋಡಿ ಪ್ರೇಮಿಗಳಿರಬಹುದು ಎಂದು ಶಂಕಿಸಲಾಗಿದೆ, ಇಬ್ಬರು ವಿಭಿನ್ನ ಕೋಮಿಗೆ ಸೇರಿದವರೆಂದು ತಿಳಿದು ಬಂದಿದ್ದು, ಧರ್ಮ ಬೇರೆ ಬೇರೆಯಾಗಿರುವುದರಿಂದ ಇವರ ಸಾವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಹುಡುಗಿ ಹಿಂದು ಧರ್ಮಕ್ಕೆ ಸೇರಿದ್ದು, ಹುಡುಗ ಕ್ರಿಶ್ಚಿಯನ್ (ಕ್ಯಾಥೋಲಿಕ್) ಧರ್ಮದವರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಈ ಜೋಡಿ ಎರಡಿ ದಿನಗಳ ಹಿಂದೆಯೇ ನಾಪತ್ತೆಯಾಇದ್ದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎನ್ನಲಾಗಿದ್ದು, ಈ ಸಂದರ್ಭ ಜಯಂತಿ ಕ್ಲಾಡ್ ಜೊತೆ ಓಡಿ ಹೋಗಿರ ಬೇಕೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.
ಇದೀಗ ಇಂದು ಈ ಇಬ್ಬರ ಶವಗಳು ಅಡ್ಯಾರ್ ಪದವು ಬಳಿಯ ರೈಲ್ವೆ ಟ್ರ್ಯಾಕ್ನಲ್ಲಿ ಪತ್ತೆಯಾಗಿದ್ದು, ಇವರ ದೇಹದ ಮೇಲೆ ರೈಲು ಚಲಿಸಿ ಮೃತಪಟ್ಟಿರುವುದು ಕಂಡು ಬಂದಿದೆ.
ಘಟನೆ ಬಗ್ಗೆ ನಿರ್ದಿಷ್ಟ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ರೈಲ್ವೆ ಪೋಲಿಸರು ಶವಗಳನ್ನು ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.