ಮಂಗಳೂರು : ನಗರದ ಬಿಕರ್ಣಕಟ್ಟೆ ಸಮೀಪದ ಶಕ್ತಿನಗರ ರಸ್ತೆಯ ಬಳಿಯ ಖಾಲಿ ಸ್ಥಳವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸ್ಥಳದಲ್ಲಿದ್ದ ಮರಗಳು ಸುಟ್ಟು ಬೂದಿಯಾದ ಘಟನೆ ರವಿವಾರ ಸಂಭವಿಸಿದೆ.
ಬಿಕರ್ಣಕಟ್ಟೆಯಿಂದ ಶಕ್ತಿನಗರಕ್ಕೆ ಹೋಗುವ ಒಳ ರಸ್ತೆಯ ವ್ಯಾಸನಗರ ಸಮೀಪದ ರಸ್ತೆಯ ಬದಿಯಲ್ಲಿರುವ ಸುಮಾರು ೩ ಎಕ್ರೆ ಖಾಸಗಿ ಜಾಗಕ್ಕೆ ಬೆಂಕಿ ತಗುಲ್ದೆ. ಘಟನೆಯಿಂದ ಈ ಜಾಗದಲ್ಲಿದ್ದ ಹಲವಾರು ಮರಗಿಡಗಳು ಸುಟ್ಟುಹೋಗಿವೆ. ಆಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಸಫಲವಾಗಿದ್ದರೂ, ಅವರು ಬರುವಷ್ಟರಲ್ಲಿ ಹೆಚ್ಚಿನ ಪ್ರಮಾಣದ ಮರಗಿಡಗಳು ಬೆಂಕಿಗಾಹುತಿಯಾಗಿದೆ.
ಈ ಸ್ಥಳಕ್ಕೆ ಬೆಂಕಿ ಹೇಗೆ ಬಿತ್ತು, ಈ ಬೆಂಕಿ ಅನಾಹುತದಿಂದ ಎಷ್ಟು ನಷ್ಟವುಂಟಾಗಿದೆ ಮುಂತಾದ ಮಾಹಿತಿಗಳ ಬಗ್ಗೆ ತಿಳಿದು ಬಂದಿಲ್ಲ. ಈ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.