ಮಂಗಳೂರು: ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡು ಮುಟ್ಟುಗೋಲು ಹಾಕಿಕೊಳ್ಳಲಾದ 6 ಕೆ.ಜಿ 840 ಗ್ರಾಂ ಗಾಂಜಾ, 960 ಗ್ರಾಂ ಹೆರಾಯಿನ್, 950 ಗ್ರಾಂ ಬ್ರೌನ್ ಶುಗರ್ ಹಾಗೂ ಸುಮಾರು 1 ಕೆ.ಜಿ 130 ಗ್ರಾಂ ನಷ್ಟು ಚರಸ್ ಅನ್ನುನ್ಯಾಯಾಲಯದ ಆದೇಶದಂತೆ ಇಂದು ಸಂಜೆ ನಗರದ ಕೇಂದ್ರ ಮೈದಾನಿನಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಸುಟ್ಟು ನಾಶಪಡಿಸಲಾಯಿತು.
ಜಿಲ್ಲಾ ಸತ್ರ ನ್ಯಾಧೀಶರಾದ ಉಮಾ ಎಂ.ಜಿ, ದ.ಕ. ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಮಂಗಳೂರು ನಗರ ಪೊಲೀಸ್ ಕಮೀಷನರ್ ಚಂದ್ರಶೇಖರ್, ಅಬಕಾರಿ ಉಪ ಅಯುಕ್ತ ಎಲ್.ಎ ಮಂಜುನಾಥ್, ಅಪರ ಜಿಲಾಧಿಕಾರಿ ಕುಮಾರ್, ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಇವರ ನೇತ್ರತ್ವದಲ್ಲಿ ನಾರ್ಕೊಟಿಕ್ ಡ್ರಗ್ಸ್ ಮತ್ತು ಸೈಕೊಟ್ರೋಫಿಕ್ ಸಬ್ ಸ್ಟೆನ್ಸಸ್ ನಿಯಮಗಳು 1985 ರಂತೆ ಸರಕಾರದಿಂದ ರಚಿಸಲಾಗಿರುವ ಕಮಿಟಿಯ ಸದಸ್ಯರ ಸಮ್ಮುಖದಲ್ಲಿ ಇಲಾಖೆ ವಶಪಡಿಸಿಕೊಂಡು ಮುಟ್ಟುಗೋಲು ಹಾಕಿಕೊಳ್ಳಲಾದ ಗಾಂಜಾ, ಹೆರಾಯಿನ್, ಬ್ರೌನ್ ಶುಗರ್ ನ್ನು ನ್ಯಾಯಾಲಯದ ಆದೇಶದಂತೆ ಸುಟ್ಟು ಹಾಕಲಾಯಿತು.