ಮಂಗಳೂರು,ಮಾ.14: ಮಂಗಳೂರಿನ ಕರಂಗಲ್ಪಾಡಿಯಲ್ಲಿರುವ ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಸದ್ಗುರು ಸಂಗೀತ ಪಾಠಶಾಲಾ (ರಿ.) ಮಂಗಳೂರು ನಡೆಸಿದ ‘ಮಂಗಳೂರು ಹಬ್ಬ’ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದರಾಗಿರುವ ಮಾಸ್ಟರ್ಅಮೃತ್ ನಾರಾಯಣ, ಕು. ಶಿಲ್ಪಾ ವೆಂಕಟೇಶ್ ಮತ್ತು ಕು. ಪ್ರಸಿದಾ ಎನ್. ಭಟ್ ಇವರುಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷರಾದ ಶ್ರೀ ಎಸ್. ಪ್ರದೀಪಕುಮಾರಕಲ್ಕೂರ, ಕರ್ಣಾಟಕ ಬ್ಯಾಂಕಿನಚೀಫ್ ಮ್ಯಾನೇಜರ್ (ಸಾರ್ವಜನಿಕ ಸಂಪರ್ಕ ವಿಭಾಗ) ಶ್ರೀ ಶ್ರೀನಿವಾಸ ದೇಶಪಾಂಡೆ, ಲಯನೆಸ್ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಅರುಣಾ ಸೋಮಶೇಖರ್, ವಿಪ್ರ ಸಮಾಜದ ಕಾರ್ಯದರ್ಶಿಗಳಾದ ಶ್ರೀಮತಿ ಪೂರ್ಣಿಮಾ ಪೇಜಾವರ, ಶ್ರೀಮತಿ ಕಮಲಾ ಭಟ್, ಸಂಸ್ಥೆಯ ನಿರ್ದೇಶಕರಾದ ನಾದಶ್ರೀ ವಿದ್ವಾನ್ ಶ್ರೀ ಗಣೇಶ್ರಾಜ್ ಎಂ.ವಿ. ಉಪಸ್ಥಿತರಿದ್ದರು.