ಮಂಗಳೂರು,ಮಾ.14: ಚಲಿಸುವ ರೈಲು ಢಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ತೊಕ್ಕೊಟಿನ ಕಾಪಿಕಾಡು ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟವನನ್ನು ಬೈಪಾಸ್ ಬಳಿಯ ನಿವಾಸಿ ಜಿತೇಶ್ (25) ಎಂದು ಗುರುತಿಸಲಾಗಿದೆ.
ರೈಲು ಬರುವುದನ್ನು ಗಮನಿಸದೆ ಹಳಿಯನ್ನು ಕ್ರಾಸ್ ಮಾಡಲು ಯತ್ನಿಸಿದ ಸಂದರ್ಭ ಘಟನೆ ನಡೆದಿರಬೇಕೆಂದು ಶಂಕಿಸಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.