ಮಂಗಳೂರು,ಮಾ.14: ನಗರದ ಶಕ್ತಿನಗರ ಸಮೀಪದ ದತ್ತನಗರ ಮೂಡಲೇಔಟ್ನ ಮನೆಯೊಂದರಲ್ಲಿ ಯುವ ಜೋಡಿಯೊಂದು ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದು, ರವಿವಾರ ರಾತ್ರಿ ಬೆಳಕಿಗೆ ಬಂದಿದೆ.
ಮೃತ ದಂಪತಿಗಳನ್ನು ಕೇರಳದ ಕೊಚ್ಚಿ ನಿವಾಸಿಗಳಾದ ಮ್ಯಾಥಿವ್ ಮತ್ತು ಮಂಜು ಎಂದು ಗುರುತಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ಈ ದಂಪತಿಗಳು ಶಕ್ತಿನಗರ ಸಮೀಪದ ದತ್ತನಗರ ಮೂಡಲೇಔಟ್ನ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯಹೊಂದಿದ್ದರು ಎನ್ನಲಾಗಿದೆ.
ಯುವಕ ಮ್ಯಾಥಿವ್ ಶ್ರೀದೇವಿ ಕಾಲೇಜಿನಲ್ಲಿ ತನ್ನ ವ್ಯಾಸಾಂಗ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದ ಎನ್ನಲಾಗಿದೆ. ಯುವತಿ ಮಂಜು ತನ್ನ ನರ್ಸಿಂಗ್ ಕೋರ್ಸ್ ಮುಗಿಸಿ ಇದೀಗ ಮಂಗಳೂರಿನ ಮಂಗಳಾ ಆಸ್ಪತ್ರೆಯಲ್ಲಿ ನರ್ಸ್ ಕೆಲಸಕ್ಕೆ ಕರೆ ಬಂದ ಕಾರಣ ಇಬ್ಬರೂ ಮಂಗಳೂರಿನಲ್ಲೇ ಬಾಡಿಗೆ ಮನೆ ಮಾಡಿ ವಾಸ್ತವ್ಯಹೊಂದಿದ್ದರು ಎನ್ನಲಾಗಿದೆ.
ರವಿವಾರ ಬೆಳಿಗ್ಗಿನಿಂದ ಈ ದಂಪತಿಗಳ ಸುಳಿವು ಲಭಿಸದ ಹಿನ್ನಲೆಯಲ್ಲಿ ರಾತ್ರಿ ನೆರೆ ಮನೆಯ ಮಹಿಳೆ ಈ ಬಗ್ಗೆ ಮನೆಯ ಮಾಲಿಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಮನೆಯ ಮಾಲಕರು ಬಂದು ಡುಪ್ಲಿಕೇಟ್ ಕೀ ಬಳಸಿ ಬೀಗ ತೆಗೆದು ಮನೆಯ ಒಳಗೆ ಪರಿಶೀಲನೆ ಮಾಡಿದಾಗ ಒಂದೇ ರೂಮಿನಲ್ಲಿ ಈ ಇಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಮಂಗಳೂರು ಗ್ರಾಮಾಂತರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.ಮೃತದೇಹವನ್ನು ವೆನ್ಲಾಕ್ನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಿ…