ಕನ್ನಡ ವಾರ್ತೆಗಳು

ಕಟ್ಟತ್ತಿಲ ಉರೂಸ್: ಸರ್ವಧರ್ಮ ಸೌಹಾರ್ಧ ಸಂಗಮ

Pinterest LinkedIn Tumblr

katatila_Shouharda_pic

ಉಳ್ಳಾಲ. ಮಾ. 07 : ಉರೂಸ್ ಪ್ರಯುಕ್ತ ನಡೆಯುವ ಸರ್ವಧರ್ಮ ಸೌಹಾರ್ಧ ಸಂಗಮ ನಿತ್ಯ ಸೌಹಾರ್ಧತೆ ಕಾಪಡುವಂತಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಸಾಲೆತ್ತೂರು ಕಟ್ಟತ್ತಿಲದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ವಲಿಯುಲ್ಲಾಹೀ (ಖ.ಸಿ.) ರವರ ಉರೂಸ್ ಮುಬಾರಕ್ ಪ್ರಯುಕ್ತ ಅಯೋಜಿಸಿದ ಸರ್ವಧರ್ಮ ಸೌಹಾರ್ಧ ಸಂಗಮವುದಲ್ಲಿ ಭಾಗವಹಿಸಿ ಮಾತನಾಡಿದರು.

ವಿ.ಎಸ್. ಅಬ್ದುಲ್ ಹಮೀದ್ ತಂಙಳ್ ಉದ್ಯಾವರ ಕಾರ್ಯಕ್ರಮ ನೇತೃತ್ವ ವಹಿಸಿ ಮಾತನಾಡಿದರು.ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮಂಡಳಿಯ ಸದಸ್ಯ ಶಾಫಿ ಸ‌ಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೌಹಾರ್ಧತೆ, ಸಹಬಾಳ್ವೆಯು ಮರೀಚಿಕೆಯಾಗುವುವ ಈ ಸಂದರ್ಭದಲ್ಲಿ ಇಂತಹ ಸೌಹಾರ್ಧ ಸಂಗಮಗಳ ಅನಿರ್ವಾತೆ ಇದೆ ಎಂದರು.

ಎಸ್‌ವೈ‌ಎಸ್. ಕರ್ನಾಟಕ ರಾಜ್ಯದ ಪ್ರ. ಕಾರ್ಯದರ್ಶಿ ಎಂ.ಎಸ್.ಎಂ. ಝೈನಿ ಕಾಮಿಲ್ ಸಖಾಫಿ ಮಾತನಾಡಿ, ಎಲ್ಲಾ ಧರ್ಮದ ಗ್ರಂಥಗಳಲ್ಲೂ ಶಾಂತಿಯನ್ನೇ ಪ್ರತಿಪಾದಿಸುತ್ತಿರುವಾಗ ಶಾಂತಿಯನ್ನು ಕದಡುವ ಧರ್ಮದ್ರೋಹಿಗಳನ್ನು ಸರ್ವಧರ್ಮಿಯರೂ ಸೇರಿ ಮಟ್ಟ ಹಾಕಬೇಕೆಂದರು.

ಜಿ.ಪಂ ಸದಸ್ಯ ಎಂ.ಎಸ್. ಮಹಮ್ಮದ್, ದ.ಕ. ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ, ಖತಿಬ್ ಅಬ್ದುಲ್ ಜಲೀಲ್ ಸಖಾಫಿ ನೀಲಗಿರಿ, ಸುಫ್ಯಾನ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾ‌ಅತ್ ಅಧ್ಯಕ್ಷರಾದ ಹೈದರ್ ಪರ್ತಿಪ್ಪಾಡಿ, ತಾ. ಪಂ ಸದಸ್ಯ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾ.ಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕೊಳ್ನಾಡು ತಾ.ಪಂ ಸದಸ್ಯ ನಾರಾಯಣ ಶೆಟ್ಟಿ, ಕುಲ್ಯಾರು, ವರ್ಕಾಡಿ ಗ್ರಾ.ಪಂ ಅಧ್ಯಕ್ಷ ಪಿ.ಬಿ. ಅಬ್ದುಲ್ ಮಜೀದ್, ಸಂಯುಕ್ತ ಜಮಾ‌ಅತ್ ಮುಡಿಪು ಅಧ್ಯಕ್ಷ ಎಸ್. ಕೆ. ಅಬ್ದುಲ್ ಖಾದರ್ ಹಾಜಿ, ಕೊಳ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಎ.ಬಿ. ಅಬ್ದುಲ್ಲ, ಮಾಜಿ ತಾ.ಪಂ ಸದಸ್ಯ ಮಾಧವ ಮಾವೆ, ಕಲ್ಲಡ್ಕ ಎಸ್.ಕೆ ಬೀಡಿ ಮಾಲಕ ಕೆ.ಎಸ್. ಮುಸ್ತಫಾ, ಕೊಳ್ನಾಡು ಗ್ರಾ.ಪಂ ಸದಸ್ಯ ಇಬ್ರಾಹಿಂ ಮಣ್ಣಗದ್ದೆ, ಅಮೀರ್ ಹಾಜಿ, ಕಲ್ಲಡ್ಕ, ಸಿಂಗಾರಿ ಬೀಡಿಗಳು ಮಾಲಕ ಸುಲೈಮಾನ್ ಹಾಜಿ, ಸಾಲೆತ್ತೂರು ಗ್ರಾ. ಪಂ ಸದಸ್ಯರಾದ ವಿ. ನಾರಾಯಣ ಪೂಜಾರಿ ವಾಲ್ತಾಜೆ, ಮುಹಮ್ಮದ್ ಮಂಚಿ, ಮಾಜಿ ತಾ.ಪಂ ಸದಸ್ಯ ಮುಹಮ್ಮದ್ ಸಾಲೆ, ನಡಿಬೈಲ್ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ, ಬದ್ರಿಯಾ ಜುಮಾ ಮಸೀದಿ ಸಾಲೆತ್ತೂರು ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್, ಪಾತೂರು ಜುಮಾ ಮಸೀದಿ ಅಧ್ಯಕ್ಷ ಪಿ.ಬಿ. ಅಬೂಬಕ್ಕರ್, ನಾಟೆಕಲ್ ಬದ್ರುಹುದಾ ಸುನ್ನೀ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಮದನಿ, ಪಂಜರೆಕೋಡಿ ಜುಮಾ ಮಸೀದಿ ಅಧ್ಯಕ್ಷ ಕೆ. ಅಬ್ದುಲ್ ಮಜೀದ್, ಬಾಳೆಪುಣಿ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ, ಉದ್ಯಮಿ ಕೆ.ಎಸ್. ಬಾಪಕುಂಞಿ, ಕಟ್ಟತ್ತಿಲ ಜುಮಾ ಮಸೀದಿ ಗೌರವಾಧ್ಯಕ್ಷ ಕೆ.ಎಂ. ಉಮ್ಮರ್ ಮದನಿ, ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಅಗರಿ, ಉಪಾಧ್ಯಕ್ಷ ಮುಹಮ್ಮದ್ ಕುಂಞಿ, ಪ್ರ. ಕಾರ್ಯದರ್ಶಿ ಪಿ. ಇಬ್ರಾಹಿಂ ನಾಟೆಕಲ್ಲು, ಕೋಶಾಧಿಕಾರಿ ಕೆ.ಪಿ. ಅಬ್ದುಲ್ ಖಾದರ್, ಬಾಳೆಪುಣಿ ಎಸ್‌ವೈ‌ಎಸ್ ಅಧ್ಯಕ್ಷ ಸಿ.ಎಚ್. ಮುಹಮ್ಮದ್ ಹಾಜಿ, ಪಿ.ಟಿ. ಇಬ್ರಾಹಿಂ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

ಸಾಲೆತ್ತೂರು ಗ್ರಾಮ ಪಂಚಾಯತ್ ಸದಸ್ಯ ಎ.ಸಿ.ಮೊದಿನ್ ಕುಂಞಿ ಸ್ವಾಗತಿಸಿದರು. ಕಟ್ಟತ್ತಿಲ ಜುಮಾ ಮಸೀದಿ ಕಾರ್ಯದರ್ಶಿ ಕೆ.ಎಂ. ಮುಹ್ಯುದ್ದೀನ್ ಮದನಿ ವಂದಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

Write A Comment