ಮಂಗಳೂರು: ಮಂಗಳೂರಿನ ಬೋಳೂರು ಸಮೀಪದ ಸುಲ್ತಾನ ಬತ್ತೇರಿಯ ನದಿಕಿನಾರೆಯಲ್ಲಿ ಇಂದು ಸಂಜೆ ಸುಮಾರು ಐವತ್ತು ವರುಷ ಪ್ರಾಯದ ಅಪರಿಚಿತ ಗಂಡಸಿನ ಶವವೊಂದು ಪತ್ತೆಯಾಗಿದೆ.
ಇಂದು ಸಂಜೆ ಸುಲ್ತಾನ ಬತ್ತೇರಿಯ ನದಿಕಿನಾರೆಯಲ್ಲಿ ಅಪರಿಚಿತ ಗಂಡಸಿನ ಶವವೊಂದು ತೇಲುತ್ತಿರುವುದನ್ನು ಕಂಡ ಮಂಗಳೂರು ಪಾಲಿಕೆಯ ಮಾಜಿ ಸದಸ್ಯ ಕಮಲಾಕ್ಷ ಸಾಲ್ಯಾನ್ ಅವರು ತಕ್ಷಣ ಪೋಲಿಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವ ಮಹಜರು ನಡೆಸಿದ ಬಳಿಕ ಶವವನ್ನು ನಗರದ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಿದೆ.
ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.