ಕನ್ನಡ ವಾರ್ತೆಗಳು

ಕಾಶೀಮಠಾಧೀಶರ ಮಂಗಳೂರು ಪುರಪ್ರವೇಶ.

Pinterest LinkedIn Tumblr

kashi_mathadish_purapravesh_1

ಮಂಗಳೂರು,ಫೆ.14: ಕಾಶೀ ಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ಕಾಜ್ಜಂಗಾಡು ಮೊಕ್ಕಾಂನಿಂದ ನಗರದ ರಥಭೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳದಲ್ಲಿ ನಡೆಯುತ್ತಿರುವ “ಮಂಗಳೂರು ರಥೊಥ್ಸವಕ್ಕೆ” ಶನಿವಾರ ಅಗಮಿಸಿದರು.

” ಶ್ರೀಗಳಿಂದ “ಪುರ ಪ್ರವೇಶ “ ಕಾರ್ಯಕ್ರಮವು ವಿಶೇಷ ರೀತಿಯಲ್ಲಿ ಜರಗಿತು.ಪ್ರಾರಂಭದಲ್ಲಿ ರಥ ಬೀದಿಯ ಸ್ವದೇಶೀ ಸ್ಟೋರ್ ಬಳಿಯಿಂದ ಶ್ರೀಗಳವರಿಗೆ ವಿಶೇಷ ಅಡ್ಡ ಪಲ್ಲಕ್ಕಿಯಲ್ಲಿ ವಿರಾಜಮಾನಗೊಳಿಸಿ, ವಿವಿಧ ವಾದ್ಯ ಘೋಷ , ಬಿರುದು ಬಾವಳಿಗಳೊಂದಿಗೆ ಸ್ವಾಗತಿಸಲಾಯಿತು.

ಶ್ರೀ ಸಂಸ್ಥಾನದ ದೇವರ ಹಾಗೂ ಪರಮಪೂಜ್ಯ ಶ್ರೀಮದ್ ಸುಧಿಂದ್ರ ತೀರ್ಥರ ಭಾವಚಿತ್ರಗಳನ್ನಿ ಪ್ರತ್ಯೆಕ ಪಲ್ಲಕ್ಕಿಗಳಲ್ಲರಿಸಿದ್ದು ರಥಬೀದಿಯುದ್ದಕ್ಕೂ ಪುರಪ್ರವೇಶ ಸಹಸ್ರಾರು ಭಗವದ್ಭಕ್ತರ ಸಮ್ಮುಖದಲ್ಲಿ ನೆರೆವೇರಿತು.

kashi_mathadish_purapravesh_3 kashi_mathadish_purapravesh_2 (2)

ಶ್ರೀ ಗಳವರ ಪುರಪ್ರವೇಶದ ಬಳಿಕ ಶ್ರೀ ದೇವರ ಭೇಟಿ ತದನಂತರ ಶ್ರೀ ದೇವರ ಮೃಗ ಭೇಟಿ ಉತ್ಸವ ನಡೇಯುತು. ನಳೀಕ ಶ್ರೀ ಗಳವರು ಡೊಂಗರಕೇರಿ ಕಟ್ಟೆಯಲ್ಲಿ ಮೃಗ ಭೇಟಿ ನಡೆಸಿ ಉತ್ಸವದಲ್ಲಿ ಪಾಲ್ಗೊಲುವರು.

ಚಿತ್ರ : ಮಂಜು ನೀರೆಶ್ವಲ್ಯ್ಯ

Write A Comment