ಕನ್ನಡ ವಾರ್ತೆಗಳು

ಹೊರರಾಜ್ಯಗಳಿಗೆ ಮರಳು ಸಾಗಾಟ ನಿಷೇಧ : ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ

Pinterest LinkedIn Tumblr

dc_meet_1

ಮಂಗಳೂರು,ಜ.14 : ಕರ್ನಾಟಕ ಸರಕಾರವು 2009ರಂದು ಹೊರರಾಜ್ಯಗಳಿಗೆ ಮರಳು ಸಾಗಾಣಿಕೆ ಮಾಡುವುದನ್ನು ನಿಷೇಧೆ ಎಂದು ಆದೇಶ ಹೊರಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳಕ್ಕೆ ಹಾಗೂ ಇತರ ಹೊರರಾಜ್ಯಗಳಿಗೆ ಅಕ್ರಮ ಮರಳು ಸಾಗಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಮರಳು ಸಾಗಾಟವನ್ನು ನಿಷೇಶಿಸಲು ಆದೇಶವನ್ನು ಭುಧವಾರ ಹೊರಡಿಸಿದ್ದಾರೆ.

ಆದರೆ ಕೆಲವರು ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಿಂದ ಪರವಾನಿಗೆ ಪಡೆದು ದ.ಕ. ಜಿಲ್ಲೆಯಲ್ಲಿನ ಮರಳನ್ನು ಕೇರಳಕ್ಕೆ ಸಾಗಾಣಿಕೆ ಮಾಡುವುದು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಒಡಿಶಾ ರಾಜ್ಯದ ಬೆರ್ಮಾಪುರ್‌, ಗಾನಿಯಂ ಇಲ್ಲಿನ ಟ್ಯಾಕ್ಸ್‌ ಇನ್‌ವಾಯ್ಸ ಬಿಲ್ಲನ್ನು ಪಡೆದು ವಾಣಿಜ್ಯ ತೆರಿಗೆ ಮೊಹರನ್ನು ನಕಲು ಮಾಡಿ ಸಾಗಾಣಿಕೆ ಮಾಡುತ್ತಿರುವುದು ಪರಿಶೀಲನಾ ಸಭೆಯಲ್ಲಿ ಅರಿವಿಗೆ ಬಂದಿರುವುದರಿಂದ ನಿಷೇಧ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ.

Write A Comment