ಮಂಗಳೂರು,ಡಿ.08: ಮಂಗಳೂರು ಮಾನಸಿಕ ಭಿನ್ನ ಸಾಮಾರ್ಥ್ಯ ಮಕ್ಕಳ ವಸತಿ ಶಾಲೆ ಹಾಗೂ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಇದರ ಜಂಟಿ ಅಶ್ರಯದಲ್ಲಿ ಎರಡು ದಿನಗಳ ರಾಜ್ಯಮಟ್ಟದ “ದಿ ಸ್ಪೆಷಲ್ ಟ್ಯಾಲೆಂಟ್ ಹಂಟ್ -2015” ಜಾನಪದ ನೃತ್ಯ ಸ್ಪರ್ಧೆಯು ನಗರದ ಪುರಭವನದಲ್ಲಿ ಆಯೋಜಿಸಲಾಗಿತ್ತು. ಇದರ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ಬಿ ರಮಾನಾಥ ರೈ ಜಿಲ್ಲಾ ನೇರವೇರಿಸಿದರು.
ಬಳಿಕ ಮಾತನಾಡಿದ ಅವರು ಭಿನ್ನ ಸಾಮಾರ್ಥ್ಯ ಮಕ್ಕಳ ಮನಸ್ಸಿನಲ್ಲಿರುವ ನೋವುಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ, ಅಂತಹ ಮಕ್ಕಳಲ್ಲಿರುವ ಕಲೆಯನ್ನು ಹಾಗೂ ಅವರಲ್ಲಿರುವ ಕಿಳರಿಮೆಯನ್ನು ಹೊಗಲಾಡಿಸಲು ಇದು ಒಂದು ಉತ್ತಮ ಪ್ರಯತ್ನ ಎಂದು ಅವರು ಹೇಳಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಮಾನಸಿಕ ಹಾಗೂ ಭಿನ್ನ ಸಾಮಾರ್ಥ್ಯಕ್ಕೆ ಒಳಪಟ್ಟ ಮಕ್ಕಳಿಗೆ ನಾವು ಪ್ರೀತಿ, ಅನುಕಂಪ, ಸಹಾನುಭೂತಿ ಯನ್ನು ತೋರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಣೇಶ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಮಹಾಬಲ ಮಾರ್ಲ, ಸಾನಿಧ್ಯ ವಸತಿಯುತ ಶಾಲೆಯ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.