ಉಳ್ಳಾಲ, ಡಿ.04 : ಉಳ್ಳಾಲ ಖಾಝಿಯಾಗಿದ್ದ ಮರ್ಹೂಂ ಅಸ್ಸೈಯದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ ಅಲ್ ಬುಖಾರಿಯವರ ಉರೂಸ್ ಕಾರ್ಯಕ್ರಮವು 2016ರ ಜ.11ರಿಂದ 13ರವರೆಗೆ ಕೇರಳದ ಎಟ್ಟಿಕುಲಮ್ನಲ್ಲಿ ನಡೆಯಲಿದೆ.
ಉರೂಸ್ ಕಾರ್ಯಕ್ರಮದ ಯಶಸ್ವಿಗೆ ಸ್ವಾಗತ ಸಮಿತಿಯನ್ನು ರಚಿಸುವ ನಿಟ್ಟಿನಲ್ಲಿ ದರ್ಗಾ ವಠಾರದಲ್ಲಿರುವ ಮದನಿ ಹಾಲ್ನಲ್ಲಿ ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಮದನಿಯ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯನ್ನು ಪಿ.ಎಂ.ಅಬ್ಬಾಸ್ ಉಸ್ತಾದ್ ಮಂಜನಾಡಿ ಉದ್ಘಾಟಿಸಿದರು. ದರ್ಗಾ ಅಧ್ಯಕ್ಷ ಹಾಜಿ ಯು.ಎಸ್. ಹಂಝ ಮಾತನಾಡಿದರು.
ಸ್ವಾಗತ ಸಮಿತಿ ನಿರ್ದೇಶಕರಾಗಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್, ಪಿ.ಎಂ. ಅಬ್ಬಾಸ್ ಉಸ್ತಾದ್, ಅಹ್ಮದ್ ಬಾವ ಉಸ್ತಾದ್, ಮಾಣಿ ಉಸ್ತಾದ್, ಬೇಕಲ ಉಸ್ತಾದ್, ಮಂಚಿ ಉಸ್ತಾದ್, ಸಾದಾತ್ ತಂಙಳ್, ಹಾಜಿ ಯು.ಎಸ್ ಹಂಝ, ಯು.ಟಿ ಖಾದರ್, ಸಿ.ಎಂ. ಇಬ್ರಾಹೀಂ, ಹಾಜಿ ವೈ. ಅಬ್ದುಲ್ಲ ಕುಂಞಿ, ಕಾವಲ್ಕಟ್ಟೆ ಹಝ್ರತ್, ಇಬ್ರಾಹೀಂ ಬಾವ ಹಾಜಿ, ಹಾಜಿ ಹಮೀದ್ ಕಂದಕ್, ಮಜೀದ್ ಹಾಜಿ, ಮುಮ್ತಾಝ್ ಅಲಿ ಆಯ್ಕೆಯಾದರು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಎಸ್.ಎಂ.ಆರ್ ಅಬ್ದುರ್ರಶೀದ್ ಹಾಜಿ, ಉಪಾಧ್ಯಕ್ಷರಾಗಿ ಸಿ.ಟಿ.ಎಂ ಸಲೀಮ್ ತಂಙಳ್, ಕಾಜೂರು ತಂಙಳ್, ಎಸ್.ಕೆ.ಖಾದರ್ ಹಾಜಿ, ಬಿ.ಜಿ. ಹನೀಫ್ ಹಾಜಿ ಉಳ್ಳಾಲ, ಶಾಫಿ ಸಅದಿ ಬೆಂಗಳೂರು, ಹೈದರ್ ಪರ್ತಿಪ್ಪಾಡಿ, ಸಂಚಾಲಕರಾಗಿ ಹುಸೈನ್ ಸಅದಿ ಕೆ.ಸಿ.ರೋಡ್, ಮುಹಮ್ಮದ್ ಅಶ್ರಫ್ ಹಾಜಿ, ಸೈಯದ್ ಝಿಯಾದ್ ತಂಙಳ್, ಆರ್. ಕೆ. ಮದನಿ ಅಮ್ಮೆಂಬಳ, ಅಬ್ದುಲ್ ಖಾದರ್ ರಝ್ವಿ, ಅಶ್ರಫ್ ಸಅದಿ ಮಲ್ಲೂರು, ಹಾಫಿಲ್ ಯಾಕೂಬ್ ಸಅದಿ ನಾವೂರ್, ಅಬ್ದುರ್ರಹ್ಮಾನ್ ಕಲ್ಕಟ್ಟ, ವರ್ಕಿಂಗ್ ಕನ್ವೀನರ್ರಾಗಿ ಮುಹಮ್ಮದ್ ಮದನಿ ಸಾಮನಿಗೆ, ಕೋಶಾಧಿ ಕಾರಿಯಾಗಿ ಎಚ್.ಎಚ್. ಉಂಞಿ ಹಾಜಿ ದೇರಳಕಟ್ಟೆ ಆಯ್ಕೆಯಾದರು.
ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ವೇ ಸ್ವಾಗತಿಸಿದರು. ಪಲ್ಲಂಗೋಡ್ ಅಬ್ದುಲ್ ಖಾದರ್ ಮದನಿ ವಂದಿಸಿದರು. ಆರ್.ಕೆ ಮದನಿ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು.