ಕುಂದಾಪುರ: ಬಿಜೂರು ಗ್ರಾಮದ ಕಂಚಿಕಾನ್ ಬಳಿಯ ನಾರಂಬಳ್ಳಿ ಎಂಬಲ್ಲಿನ ಗದ್ದೆಯಲ್ಲಿ ಟ್ರಾಕ್ಟರ್ ಮೂಲಕ ಉಳುಮೆ ನಡೆಸುತ್ತಿರುವ ಸಂದರ್ಭ ಟ್ರ್ಯಾಕ್ಟರ್ಗೆ ಸಿಲುಕಿ ಬಾಲಕನೋರ್ವ ಮೃತಪಟ್ಟಿದ್ದಾನೆ.
ಚೇತನ್ (9) ಮೃತಪಟ್ಟ ಬಾಲಕ. ರವಿವಾರ ಬೆಳಗ್ಗೆ ಗದ್ದೆಯಲ್ಲಿ ಟ್ರ್ಯಾಕ್ಟರ್ ನಲ್ಲಿ ಉಳುಮೆ ನಡೆಸುತ್ತಿರುವಾಗ ಟ್ರ್ಯಾಕ್ಟರ್ನ ಹಿಂಬದಿಯ ನೇಗಿಲುಗಳಿಗೆ ಅಕಸ್ಮಿಕವಾಗಿ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.