ಮಂಗಳೂರು,ನ.28: ಸ್ವಸ್ತಿ ಆರ್ಎಕ್ಸ್ ಟ್ರಸ್ಟ್ ನಿಯೋಜಿತ 9ನೇ ವರ್ಷದ ಆರ್ಎಕ್ಸ್ ಲೈಫ್ ಹರ್ ಕ್ಯುಲಸ್ ಸೈಕಲ್ ರ್ಯಾಲಿಯು ಡಿಸೆಂಬರ್ 6ರ ಆದಿತ್ಯವಾರ ಮಂಗಳೂರಿನಲ್ಲಿ ನಡೆಯಲಿದ್ದು, ಅಂದು ಬೆಳಗ್ಗೆ 6.30 ಕ್ಕೆ ಲೇಡಿಹಿಲ್ ವೃತ್ತದಿಂದ ಹೊರಡುವ 21 ಕಿ.ಮೀ ದೂರದ ಈ ಸೈಕಲ್ ರ್ಯಾಲಿಯನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಶ್ರೀ ಎಸ್ ಮುರುಗನ್ ಉದ್ಘಾಟಿಸಲಿದ್ದಾರೆ ಎಂದು ಸ್ವಸ್ತಿ ಆರ್.ಎಕ್ಸ್ ಲೈಫ್ ಟ್ರಸ್ಟ್ ನ ಟ್ರಸ್ಠಿ ಡಾ.ಗಾಯತ್ರಿ ಅವರು ಮಾಹಿತಿ ನೀಡಿದ್ದಾರೆ.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರ್ಯಾಲಿಯು ಬಿಜೈ- ಮಾಲೆಮಾರ್ – ಕುಳೂರು-ಪಣಂಬೂರು-ಉರ್ವಸ್ಟೋರ್- ಅಶೋಕನಗರ- ಹೊಯ್ಗೆ ಬೈಲ್ – ಬತ್ತೇರಿ ಮಾರ್ಗವಾಗಿ ಸಾಗಿ ಸುಮಾರು 9.ರಿಂದ 9.30 ಸಮಯಕ್ಕೆ ಬೋಳೂರಿನ ಅಮೃತ ವಿದ್ಯಾಲಯಂ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ ಎಂದರು.
ರ್ಯಾಲಿಯ ಉದ್ದೇಶ :
ರಸ್ತೆ ಸುರಕ್ಷತೆ ಈ ಸಲದ ರ್ಯಾಲಿಯ ಉದ್ದೇಶವಾಗಿದ್ದು ” ಸುರಕ್ಷಿತ ರಸ್ತೆ – ಸುರಕ್ಷಿತ ಸವಾರಿ: ಧೈಯ ವಾಕ್ಯ” .ನಗರದ ರಸ್ತೆಗಳು ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷಿತವಾಗಿರುವಂತೆ ಸಂಬಂಧ ಪಟ್ಟವರಲ್ಲಿ ಆಗ್ರಹಿಸಲು ಹಾಗೂ ಚತುಷ್ಚಕ್ರ ವಾಹನ ಚಾಲಕರು ಸೈಕಲ್ ಸವಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೇಪಿಸಲು ಈ ರ್ಯಾಲಿಯು ಸಹಾಯಕಾರಿಯಾಗಲಿದೆ ಎಂದವರು ಹೇಳಿದರು.
ಕನ್ನಡಿಗ ವರ್ಲ್ಡ್ ಛಾಯಾಚಿತ್ರ ಸ್ಪರ್ಧೆ:
ಇದೇ ಸಂದರ್ಭದಲ್ಲಿ ಕನ್ನಡಿಗ ವರ್ಲ್ಡ್ ಡಾಟ್ ಕಾಮ್ ಪ್ರಯೋಜಕತ್ವದಲ್ಲಿ ಸೈಕಲ್ ರ್ಯಾಲಿಯ ಪೋಟೊ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ವಿಷಯ: ಸಮೂಹ ಸವಾರಿ (ರೈಡಿಂಗ್ ಟುಗೆದರ್ ), ಇದರಲ್ಲಿ ಎಲ್ಲರೂ ಭಾಗವಹಿಸಬಹುದು. ಚಿತ್ರವನ್ನು ರ್ಯಾಲಿಯ ಸಮಯದಲ್ಲಿ ಸೆರೆಹಿಡಿಯಬೇಕು. ಒಬ್ಬರು 3 ಫೋಟೊವನ್ನು ಕಳಿಸಬಹುದು.
ಕಳಿಸಬೇಕಾದ ವಿಳಾಸ : svastirxlife@gmail.com, ಡಿಸೆಂಬರ್ 10ರ ಒಳಗೆ ಒಳಗೆ ಕಳುಹಿಸಬೇಕು ಇದಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಆಯ್ದು ಫೋಟೊಗಳಿಗೆ 3 ಬಹುಮಾನಗಳನ್ನು ( ರೂ 3000.2000.1000) ನೀಡಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಠಿ ವಂದನಾ ನಾಯಕ್, ಸಂಚಾಲಕರಾದ ಗಿರಿಧರ್ ಕಾಮಾತ್ ಮತ್ತು ನರೇಂದ್ರ ನಾಯಕ್ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 0824 – 2457192 ಅಥವಾ ವೈಬ್ ಸೈಟ್: www.rxlife.in ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.