ಕನ್ನಡ ವಾರ್ತೆಗಳು

ನ.19: ಕಲ್ಕೂರ ಪ್ರತಿಷ್ಠಾನದಿಂದ ಪಂಚಮಿ ಮಾರೂರುಗೆ ಪೌರ ಸನ್ಮಾನ .

Pinterest LinkedIn Tumblr

panchami_Central_award_2

ಮಂಗಳೂರು,ನ.17: ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಇಲಾಖೆ ನೀಡುವ ನ್ಯಾಷನಲ್‌ ಚೈಲ್ಡ್‌ ಅವಾರ್ಡ್ ಫಾರ್‌ಎಕ್ಸ್‌ ಪೆನ್ಶನಲ್‌ ಅಚೀವ್‌ಮೆಂಟ್-2015 ರಾಷ್ಟ್ರೀಯ‌ ಅಸಾಧಾರಣ ಪ್ರತಿಭಾ ಪುರಸ್ಕಾರವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ‌ಅವರಿಂದ ಸ್ವೀಕರಿಸಿರುವ ಮೂಡಬಿದಿರೆ ಜೈನ ಪ್ರೌಢಶಾಲಾ ವಿದ್ಯಾರ್ಥಿನಿ ಪಂಚಮಿ ಮಾರೂರು ‌ಅವರಿಗೆ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪೌರಸಂಮಾನ ಮಾಡಲಾಗುವುದು.

ನ.19ರಂದು ಗುರುವಾರ, ಬೆಳಿಗ್ಗೆ 10 ಕ್ಕೆ ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಸಮಾರಂಭ ಜರಗಲಿದ್ದು ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರರಾವ್ ಹಾಗೂ ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವ ಮೂಲಕ ಪಂಚಮಿ ಮಾರೂರು ‌ಅವರನ್ನು ಸನ್ಮಾನಿಸುವರು. ಪ್ರತಿಷ್ಠಾನದ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ಸಮಾರಂಭದ‌ ಅಧ್ಯಕ್ಷತೆ ವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

Write A Comment