ಕನ್ನಡ ವಾರ್ತೆಗಳು

ಇಂದ್ರಧನುಷ್ ಅಭಿಯಾನ-2015 ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ.

Pinterest LinkedIn Tumblr

lady_ghoshan_hsptl_1

ಮಂಗಳೂರು,ಅ.07 : ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಇಂದ್ರಧನುಷ್ ಅಭಿಯಾನ-2015 ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

lady_ghoshan_hsptl_2lady_ghoshan_hsptl_3 lady_ghoshan_hsptl_4a lady_ghoshan_hsptl_6 lady_ghoshan_hsptl_7 lady_ghoshan_hsptl_8 lady_ghoshan_hsptl_9 lady_ghoshan_hsptl_10 lady_ghoshan_hsptl_11 lady_ghoshan_hsptl_12

ಬಳಿಕ ಮಾತನಾಡಿದ ಅವರು, ಬಾರತ ದೇಶವನ್ನು ಈಗಾಗಲೇ ಪೋಲಿಯೊ ಮುಕ್ತ ರಾಷ್ಟ್ರ ಎಂದು ಘೋಷಿಸಲಾಗಿದೆ. ಆದರೂ ದೇಶದಲ್ಲಿ ಶೇ.68 ರಷ್ಟು ಮಂದಿ ಮಾತ್ರ ಪೋಲಿಯೊ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಹಾಗೂ ಸುಮಾರು 98 ಲಕ್ಷ ಮಕ್ಕಳು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ನೀಡುವ ಎಲ್ಲಾ ಲಸಿಕೆಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ, ಅದುದರಿಂದ ಇಂದ್ರಧನುಷ್ ಅಭಿಯಾನದ ಮೂಲಕ ಶೇ.100ರ ಗುರಿ ತಲುಪಲಿ ಎಂದು ಹೇಳಿದರು.

ದ.ಕ ಜಿಲ್ಲಾಧಿಕಾರಿ ಎ.ಬಿ, ಇಬ್ರಾಹಿಂ, ಸಿಇಒ ಶ್ರೀವಿದ್ಯಾ, ಡಿಎಚ್ಒ ಡಾ.ರಾಮಕೃಷ್ಣ, ಡಿಎಂಒ ಡಾ. ರಾಜೇಶ್ವರಿ ದೇವಿ, ಆಶಾ ತಿಮ್ಮಕ್ಕ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Write A Comment