ಮಂಗಳೂರು,ಸೆ.26 : ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ಎ.ಜೆ. ಆಸ್ಪತ್ರೆ ಸಹಯೋಗದಿಂದ ಶನಿವಾರ ಮಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ನಡೆಯಿತು.
ಈ ಸಂದರ್ಭದಲ್ಲಿ ಎನ್ನೆಸ್ಸೆಸ್ ಘಟಕದ ನಾಯಕಿ ವಿದ್ಯಾರ್ಥಿನಿ ರಕ್ಷಾ ಎಮ್.ಎಸ್ ಮಾತನಾಡಿ, ದಾನಗಳಲ್ಲಿ ಅಂಗಾಂಗ ದಾನವು ಅತೀ ಶ್ರೇಷ್ಠ್ರವಾದುದು. ಹೃದಯ, ಕಣ್ಣು, ಕಿಡ್ನಿ ಸೇರಿದಂತೆ ಅಂಗಾಂಗಳನ್ನು ದಾನ ಮಾಡುದರಿಂದ ಇನ್ನೊಬ್ಬರಿಗೆ ಜೀವದಾನ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಸೆಂಟ್ ಕಾಲೇಜಿನ ಪ್ರಾಂಶುಪಾಲೇ ಸುಲೋಚನ ನಾರಾಯಣ, ಉಪನ್ಯಾಸಕರಾದ ಪಲ್ಲವಿ, ಸರಿತಾ, ಗಣೇಶ ನಾಯಕ್ ಎನ್ನೆಸ್ಸೆಸ್ ಘಟಕದ ವಿಧ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.