ಕನ್ನಡ ವಾರ್ತೆಗಳು

ಕೊಣಾಜೆ ನಿರ್ಜನ ಗುಡ್ಡ ಪ್ರದೇಶದಲ್ಲಿ ವ್ಯಕ್ತಿಯೊರ್ವರು ನೇಣು ಬಿಗಿದು ಅತ್ಮಹತ್ಯೆ.

Pinterest LinkedIn Tumblr

Suside_mudipu_photo_1

ಮಂಗಳೂರು,ಸೆ.18  : ಕೊಣಾಜೆ ಮುಡಿಪುನ ಬಳಿಯ ನಿರ್ಜನ ಗುಡ್ಡ ಪ್ರದೇಶದಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಸೋಮೇಶ್ವರ ಉಚ್ಚಿಲ ನಿವಾಸಿ ಜಯಪ್ರಕಾಶ್ (35) ಎಂದು ಗುರುತಿಸಲಾಗಿದೆ.

Suside_mudipu_photo_2

ಜಯಪ್ರಕಾಶ್‌ ಬುಧವಾರ ಬೆಳಗ್ಗೆ ಹತ್ತು ಗಂಟೆಯಿಂದ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಈ ಕುರಿತು ಜಯಪ್ರಕಾಶ್ ಮನೆಯವರು ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಸಾಯಂಕಾಲ ನಾಪತ್ತೆ ಪ್ರಕರಣದ ದೂರನ್ನೂ ದಾಖಲಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ . ಜಯಪ್ರಕಾಶ್ ಪಂಪ್ ವೆಲ್ ಬಳಿ ಇನ್‌ವೆಟರ್ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಕೋಣಾಜೆ ಪೊಲೀಸರು ಆತ್ಮಹತ್ಯಾ ಪ್ರಕರಣವೆಂದು ದಾಖಲಿಸಿಕೊಂಡಿದ್ದು,

Write A Comment