ಕನ್ನಡ ವಾರ್ತೆಗಳು

ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Pinterest LinkedIn Tumblr

konkani_awrd_cermony_3

ಮಂಗಳೂರು, ಆ.21: ಆರ್ಥಿಕ ಮುಗ್ಗಟ್ಟಿನಿಂದ ಯುವಕ-ಯುವತಿ ಯರು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ವಿಶ್ವ ಕೊಂಕಣಿ ಕೇಂದ್ರ ವಿದ್ಯಾರ್ಥಿ ವೇತನನಿಧಿ ಸ್ಥಾಪಿಸಲಾಗಿದೆ. ವಿದ್ಯಾರ್ಥಿ ವೇತನ ವಿತರಣೆ ಮೂಲಕ ಆರ್ಥಿಕ ಬೆಂಬಲ ನೀಡುವ ಜೊತೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಭಾವನಾತ್ಮಕ ಬೆಸುಗೆ ಸಾಧ್ಯವಾಗಿದೆ ಎಂದು ಮಣಿಪಾಲ ಗ್ಲೋಬಲ್ ಅಕಾಡಮಿ ಅಧ್ಯಕ್ಷ ಟಿ.ವಿ.ಮೋಹನದಾಸ್ ಪೈ ಹೇಳಿದರು.

ನಗರದ ಟಿಎಂಎ ಪೈ ಕನ್ವೆನ್ಶನ್ ಸಭಾಂಗಣದಲ್ಲಿ ಆಯೋಜಿಸಲಾದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಖಾರ್ವಿ, ಕುಡುಬಿ ಮುಂತಾದ ಸಮುದಾಯದವರು ವಿದ್ಯಾರ್ಥಿ ವೇತನದಿಂದ ಶಿಕ್ಷಣ ಪಡೆದು ಉತ್ತಮ ಸ್ಥಾನಮಾನ ಗಳಿಸಲು ಸಾಧ್ಯವಾಗಿದೆ ಎಂದರು.

konkani_awrd_cermony_1 konkani_awrd_cermony_2 konkani_awrd_cermony_4 konkani_awrd_cermony_5 konkani_awrd_cermony_6 konkani_awrd_cermony_7 konkani_awrd_cermony_8 konkani_awrd_cermony_9 konkani_awrd_cermony_10 konkani_awrd_cermony_11 konkani_awrd_cermony_12 konkani_awrd_cermony_13 konkani_awrd_cermony_14 konkani_awrd_cermony_15 konkani_awrd_cermony_16 konkani_awrd_cermony_17 konkani_awrd_cermony_18 konkani_awrd_cermony_19

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಇಂಡೋಕೊ ರೆಮಿಡೀಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ವಿ.ಬಂಬ್ಳೂಕರ್, ಭಟ್ಕಳ ಅಂಜುಮನ್ ಸಮೂಹ ಸಂಸ್ಥೆಗಳ ಮೆಂಟರ್ ಎಸ್.ಎಂ.ಸೈಯದ್ ಖಲೀಲುರ್ರಹ್ಮಾನ್, ಹೈದ್ರಾಬಾದ್‌ನ ಉದ್ಯಮಿ ಪ್ರಕಾಶ್ ಪೈ ಮುಖ್ಯ ಅತಿಥಿಗಳಾಗಿದ್ದರು.

ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ ಅಧ್ಯಕ್ಷ ರಾಮದಾಸ್ ಕಾಮತ್ ಯು., ಕಾರ್ಯದರ್ಶಿ ಪ್ರದೀಪ್ ಜಿ.ಪೈ, ಸಂದೀಪ್ ಶೆಣೈ ಉಪಸ್ಥಿತರಿದ್ದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Write A Comment