ಕನ್ನಡ ವಾರ್ತೆಗಳು

ಅಗಸ್ಟ್ 15: ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಅವರಿಂದ ಸ್ವಾತಂತ್ರ್ಯೋತ್ಸವ ಸಂದೇಶ – ಕವಿಗೋಷ್ಠಿ.

Pinterest LinkedIn Tumblr

karnal_sarat_photo

ಮಂಗಳೂರು,ಆಗಸ್ಟ್.14: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅಗಸ್ಟ್ 15 ಶನಿವಾರ ಮಂಗಳೂರಿನ ಡಾನ್‌ಬಾಸ್ಕೋ ಹಾಲ್‌ನಲ್ಲಿ‌ ಅಪರಾಹ್ನ ೩ಕ್ಕೆ ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿಯವರು ಸ್ವ್ವಾತಂತ್ರ್ಯೋತ್ಸವ ಸಂದೇಶ ನೀಡಲಿರುವರು.

ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್‍ಯಕ್ರಮದಲ್ಲಿ ಕರ್ನಲ್ ಭಂಡಾರಿಯವರನ್ನು ಗೌರವಿಸಲಾಗುವುದು, ಕವಿಗೋಷ್ಠಿ ನಡೆಯಲಿದ್ದು ತದನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್‍ಯಕ್ರಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನೃತ್ಯ ಭಾರತಿ ಕದ್ರಿ ಇವರಿಂದ ‘ನೃತ್ಯರೂಪಕ’, ದೇಶಭಕ್ತಿ ಗೀತೆ ಹಾಗೂ ನಿಶನ್ ಮತ್ತು ಬಳಗದವರಿಂದ ದೇಶಭಕ್ತಿಗೀತೆ ಕಾರ್‍ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ

Write A Comment