ಮಂಗಳೂರು.ಜುಲೈ.29 : ಸ್ವಚ್ಚ ಭಾರತದ ಅಂಗವಾಗಿ ಸೈಕಲ್ನಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಸ್ವಚ್ಚ ಭಾರತದ ಅರಿವು ಮೂಡಿಸುತ್ತಿರುವ ಉತ್ತರ ಪ್ರದೇಶದ ಅಭಿಷೇಕ್ ಕುಮಾರ್ ಶರ್ಮಾ ಇವರನ್ನು ಮಂಗಳವಾರ ರಾತ್ರಿ ಮಂಗಳೂರಿನಲ್ಲಿ ಸ್ವಾಗತಿಸಲಾಯಿತು.
ಮಾಜಿ ವಿಧಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ರವಿಶಂಕರ್ ಮಿಜಾರ್, ಪ್ರಧಾನ ಕಾರ್ಯದರ್ಶಿ ವೇದವ್ಯಾಸ ಕಾಮತ್, ಮ.ನ.ಪಾ. ಸದಸ್ಯರಾದ ರಾಜೇಂದ್ರ ಕುಮಾರ್, ಗುರುಚರಣ್ ಮುಂತಾದವರು ಉಪಸ್ಥಿತರಿದ್ದರು.