ಉಳ್ಳಾಲ ಜುಲೈ, 15 : ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಅಧೀನದಲ್ಲಿರುವ ರೇಡ್ ಪ್ಲಸ್ ಪಬ್ಲಿಕೇಶನ್ ಹೊರತಂದ ಐದು ಧಾರ್ಮಿಕ ಕೃತಿಯನ್ನು ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಸಹಕಾರದೊಂದಿಗೆ ಸುಮಾರು 250 ಕೃತಿಗಳನ್ನು ಓದುಗರಿಗೆ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಸಲಹಾ ಸಮಿತಿ ಸದಸ್ಯ ಅಬ್ದುಲ್ ನಾಸೀರ್ ಸಅದಿ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಲ್ಯಾಸ್ ಸಖಾಫಿ, ಇಮಾಂ ನಬವೀ ಮದ್ರಸ ಸೌದಿ ಅರೇಬಿಯ ಮುದರ್ರಿಸ್ ಹನೀಫ್ ಸಅದಿ ಅಲ್-ಅಫ್ಳಲಿ, ಎಸ್ಸೆಸ್ಸೆಫ್ ಮುಖಂಡರಾದ ಅಲ್ತಾಫ್ ಕುಂಪಲ, ಸಮೀರ್ ಸಖಾಫಿ, ಶಫೀಕ್ ಅಹ್ಸನಿ, ಸಮೀರ್ ಸೇವಂತಿಗುಡ್ಡೆ, ಅನ್ಸಾರ್ ಅಳೇಕಲ, ಜಾಫರ್ ಯು.ಎಸ್, ಬಾತೀಷ್ ಮಂಚಿಲ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.