ಕನ್ನಡ ವಾರ್ತೆಗಳು

“ರಾಬಿಯತುಲ್ ಅರಬಿಯ್ಯ ಲಿಸ್ಸಖಾಫಾತಿಲ್ ಅದಬಿ ವಲ್ ಫಿಕ್ರ್” ರಾಯಭಾರಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಗೆ ಸನ್ಮಾನ.

Pinterest LinkedIn Tumblr

Ullala_all_fikrd_1

ಉಳ್ಳಾಲ , ಜು. 13 : ಬುದ್ದಿಜೀವಿಗಳ, ಚಿಂತಕರ ಸಾಹಿತಿಗಳ, 17  ಮಧ್ಯಪ್ರಾಚ್ಯ ದೇಶಗಳ, ಒಕ್ಕೂಟವಾದ “ರಾಬಿಯತುಲ್ ಅರಬಿಯ್ಯ ಲಿಸ್ಸಖಾಫಾತಿಲ್ ಅದಬಿ ವಲ್ ಫಿಕ್ರ್” ಇದರ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿ ಭಾರತಕ್ಕೆ ಆಗಮಿಸಿದ ಸುಲ್ತಾನುಲ್ ಉಲಮಾ ಕಾಂತಪುರಮ್ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರವರನ್ನು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿಯ ವತಿಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಯು.ಎಸ್ ಹಂಝರವರು ಶಾಲು ಹೊದಿಸಿ ಸನ್ಮಾನಿಸಿದರು.

Ullala_all_fikrd_7 Ullala_all_fikrd_9 Ullala_all_fikrd_3 Ullala_all_fikrd_6 Ullala_all_fikrd_5 Ullala_all_fikrd_4 Ullala_all_fikrd_10

ಈ ಸಂದರ್ಭದಲ್ಲಿ ದರ್ಗಾ ಪ್ರಧಾನ ಕಾರ್ಯದರ್ಶಿ ಯು.ಟಿ ಇಲ್ಯಾಸ್. ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಬಿ.ಜಿ ಹನೀಫ್ ಹಾಜಿ, ಟ್ರಸ್ಟ್ ಕೋಶಾಧಿಕಾರಿ ನಾಝಿಮ್, ದರ್ಗಾ ಖಜಾಂಜಿ ಮೊಹಮ್ಮದ್ ಹಾಜಿ, ಅಲ್ ಮದೀನ ಯತೀಮ್ ಖಾನ ಚೇರ್‌ಮೆನ್ ಶೈಖುನಾ ಅಬ್ಬಾಸ್ ಉಸ್ತಾದ್ ಮಂಜನಾಡಿ, ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಶಾಫಿ ಸ‌ಅದಿ, ಉದ್ಯಮಿ ಮುಮ್ತಾಝ್ ಅಲಿ ಉಪಸ್ಥಿತರಿದ್ದರು.

Write A Comment