ಕುಂದಾಪುರ: ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ಮಿರಿಂಡಾ ಎಸ್ಟೇಟ್ ಬಳಿ ಆಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿರುವಾಗ ಪೊಲೀಸರು ತಡೆದು ವಾಹನ ಸಹಿತ ನಾಲ್ಕು ಗೋವುಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಗೂ ಮೂವರನ್ನು ಬಂಧಿಸಿದ್ದಾರೆ. ಓರ್ವ ಪರಾರಿಯಾಗಿದ್ದಾನೆ.
ಬಂದಿತರನ್ನು ಅಮಾಸೆಬಲು ಗ್ರಾಮದ ಬಸವ ಕುಲಾಲ್, ಚಿಕ್ಕ ಮರಕಾಲ ಹಾಗೂ ಶೇಖರ ಶೆಟ್ಟಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಮುಖ ಆರೋಪಿ ಸಿದ್ದಾಪುರ ಗ್ರಾಮದ ಹೆಗ್ಗೇರಿಯ ಅಂತಯ್ಯ ಶೆಟ್ಟಿ ಪರಾರಿಯಾಗಿದ್ದಾನೆ.
ಮಚ್ಚಟ್ಟು ಬಳಿ ಪೊಲೀಸರು ಗಸ್ತು ತಿರುಗುತ್ತಿರುವಾಗ ಮಹೇಂದ್ರ ಗೂಡ್ಸ್ ರಿಕ್ಷಾ ತಡೆದು ನಿಲ್ಲಿಸಿದಾಗ ವಾಹನದಲ್ಲಿ ಆಕ್ರಮವಾಗಿ ಗೋವುಗಳನ್ನು ಸಾಗಣಿಕೆ ಮಾಡಿರುವುದು ಪತ್ತೆಯಾಗಿದೆ. ಈ ಗೋವುಗಳಲ್ಲಿ ಮಚ್ಚಟ್ಟು ಹಾಗೂ ಉಳ್ಳೂರು ಪರಿಸರದಿಮದ ಖರೀದಿಸಿ ಮಂಗಳೂರಿನ ಕಸಾಯಿಖಾನೆಗೆ ಸಾಗಿಸುತ್ತಿರುವ ಬಗ್ಗೆ ವಿಚಾರಣೆಯ ವೇಳೆ ಹೇಳಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಎಎಸ್ಐ ರಮೇಶ್ ಪವಾರ್, ಹೆಡ್ಕಾನ್ಸ್ಟೇಬಲ್ ರಾಮಚಂದ್ರ , ಸಿಬ್ಬಂದಿಗಳಾದ ಆದರ್ಶ ಹಾಗೂ ಆನಂದ ಪೂಜಾರಿ ಭಾಗವಹಿಸಿದ್ದರು.
ಅಮಾಸೆಬಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.